Thursday, June 26, 2025
Homeಕರಾವಳಿಐರಾವತ ಬಸ್ಸಿನ ಹಿಂಬದಿಗೆ ಹತ್ತಿಕೊಂಡ ಬೆಂಕಿ; ರಸ್ತೆಯಲ್ಲಿದ್ದ ಕೆಸರು, ನೀರು ಎರಚಿ ಬೆಂಕಿ ನಂದಿಸಿದ ಸ್ಥಳೀಯರು

ಐರಾವತ ಬಸ್ಸಿನ ಹಿಂಬದಿಗೆ ಹತ್ತಿಕೊಂಡ ಬೆಂಕಿ; ರಸ್ತೆಯಲ್ಲಿದ್ದ ಕೆಸರು, ನೀರು ಎರಚಿ ಬೆಂಕಿ ನಂದಿಸಿದ ಸ್ಥಳೀಯರು

spot_img
- Advertisement -
- Advertisement -

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿ ಜು.18ರ ಬೆಳಗ್ಗೆ ಐರಾವತ ಬಸ್ಸೊಂದಕ್ಕೆ ಬೆಂಕಿ ಹಿಡಿದ ಘಟನೆ ಸಂಭವಿಸಿದ್ದು, ಸ್ಥಳೀಯ ಯುವಕರ ತಂಡವು ಬೆಂಕಿ ನಂದಿಸಿ, ಅವಘಡವನ್ನು ತಪ್ಪಿಸಿದ್ದಾರೆ.

ಐರಾವತ ಬಸ್ ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ, ಉಪ್ಪಿನಂಗಡಿ ಬಳಿಯಲ್ಲಿ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದು, ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. 

ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದಂತಹ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿಗಳು, ಆಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನೆಯಿಂದ ಬಸ್ಸಿನ ಹಿಂಬದಿಗೆ ಹಾನಿಯಾಗಿದೆ. 

- Advertisement -
spot_img

Latest News

error: Content is protected !!