- Advertisement -
- Advertisement -
ಸವಣೂರು: ಹುಲ್ಲು ತರಲು ತೋಟಕ್ಕೆ ಹೋದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟಿದ್ದಾರೆ . ಕಡಬ ತಾಲೂಕಿನ ಪುಪ್ಪಾಡಿ ಗ್ರಾಮದ ತೋಟದಡ್ಕ ನಿವಾಸಿ , ಬಾಬು ಗೌಡ ( 72 ) ಮೃತಪಟ್ಟವರು. ಇವರು ಕಡಬ ಠಾಣಾ ಹೆಡ್ ಕಾನ್ಸ್ಟೇಬಲ್ ಹರೀಶ್ ಅವರ ತಂದೆ.
ಎಂದಿನಂತೆ ತೋಟಕ್ಕೆ ಹುಲ್ಲು ತರಲೆಂದು ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ತೋಟದ ಮಧ್ಯೆ ಇರುವ ಕೆರೆಗೆ ಬಿದ್ದಿದ್ದಾರೆ . ಪೋಲೀಸ್ ಹರೀಶ್ ಅವರು ಬೆಳಿಗ್ಗೆ ಕರ್ತವ್ಯಕ್ಕೆ ಕಡಬ ಠಾಣೆಗೆ ಆಗಮಿಸಿದ ಬಳಿಕ ಈ ಘಟನೆ ನಡೆದಿದ್ದು , ಮನೆಯವರು ಗಮನಿಸುವಷ್ಟರಲ್ಲಿ ಬಾಬು ಗೌಡರು ಕೆರೆಯಲ್ಲಿ ಮುಳುಗಿ ಹೋಗಿದ್ದರು. ಆ ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ .
- Advertisement -