ಬೆಳ್ತಂಗಡಿ: ಇಲ್ಲಿನ ನಿವಾಸಿ ಸಂತೋಷ್ ಸಿ ಕೆ ಪ್ರಾಯ ಹಾಗು ಅವರ ತಾಯಿಯ ಮೇಲೆ ಸಂತೋಷ್ ಸಿ ಕೆ ಅವರ ಹೆಂಡತಿಯ ಮನೆಯವರು ಬಂದು ಹಲ್ಲೆ ಮಾಡಿದ ಘಟನೆ ನಡೆದಿದೆ.
ಪ್ರಕರಣದ ಪಿರ್ಯಾದಿದಾರರಾದ ತೋಟತ್ತಾಡಿ ಗ್ರಾಮ, ಬೆಳ್ತಂಗಡಿ ನಿವಾಸಿ ಸಂತೋಷ್ ಸಿ ಕೆ ಪ್ರಾಯ (36) ಎಂಬವರ ದೂರಿನಂತೆ, ಪಿರ್ಯಾದಿರವರು ದಿನಾಂಕ:03-12-2023 ರಂದು ಮದ್ಯಾಹ್ನ ಸಮಯ ಬೆಳ್ತಂಗಡಿ ತಾಲೂಕು ತೋಟತ್ತಾಡಿ ಗ್ರಾಮದ ಚೆರಕಿಲ್ ಎಂಬಲ್ಲಿ ತನ್ನ ತೋಟಕ್ಕೆ ಹೋಗಿದ್ದಾಗ, ಆರೋಪಿಗಳಾದ ಪಿರ್ಯಾದಿದಾರರ ಹೆಂಡತಿಯ ತಂದೆ ಸನ್ನಿ, ಬಾವ ಸೋನಿ ಮತ್ತು ಆತನ ಹೆಂಡತಿ ಅವರ ಬಾಬ್ತು 2 ಮೋಟಾರ್ ಸೈಕಲ್ ನಲ್ಲಿ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು, ಮನೆಯ ಜಗಲಿಗೆ ಅಕ್ರಮ ಪ್ರವೇಶ ಮಾಡಿ ಮನೆಯ ಜಗಲಿಯಲ್ಲಿ ಕುಳಿತಿದ್ದ ಪಿರ್ಯಾದಿದಾರರ ತಾಯಿಯಲ್ಲಿ ಪಿರ್ಯಾದಿರವರ ಬಗ್ಗೆ ವಿಚಾರಿಸಿ ಅರೋಪಿ ಸನ್ನಿರವರು ಪಿರ್ಯಾದಿದಾರರ ತಾಯಿಯನ್ನು ಕೈಯಿಂದ ದೂಡಿ ಹಾಕಿದ್ದು, ಶಬ್ದ ಕೇಳಿ ಸ್ಥಳಕ್ಕೆ ಬಂದ ಪಿರ್ಯಾದಿದಾರರಿಗೆ ಪಿರ್ಯಾದಿದಾರರ ಮಾವ ಸನ್ನಿರವರು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಹಲ್ಲೆಗೆ ಮುಂದಾದಾಗ ಪಿರ್ಯಾದಿದಾರರ ತಾಯಿ ಅಡ್ಡ ಬಂದಿರುತ್ತಾರೆ.
ಬಳಿಕ ಆರೋಪಿಗಳಾದ ಸನ್ನಿ, ಸೋನಿ ಹಾಗೂ ಸೋನಿರವರ ಹೆಂಡತಿ ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿದ್ದು, ಪಿರ್ಯಾದಿದಾರರ ಹೆಂಡತಿ ಮೋನ್ಸಿರವರು ಅವನನ್ನು ಜೀವಸಹಿತ ಬಿಡಬೇಡಿ ಎಂದು ಇತರರಲ್ಲಿ ಹೇಳಿರುತ್ತಾರೆ. ಆರೋಪಿತರ ಪೈಕಿ ಸೋನಿರವರು ಮುಂದಕ್ಕೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂದು ಬೆದರಿಕೆ ಒಡ್ಡಿ, ಎಲ್ಲಾ ಆರೋಪಿಗಳು ಸ್ಥಳದಿಂದ ತೆರಳಿರುತ್ತಾರೆ.
ಪಿರ್ಯಾದಿದಾರರು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಮಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 97/2023 ಕಲಂ: 448,323,324,504,506 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.