- Advertisement -
- Advertisement -
ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರು ಜನರು ಮಳೆಯಿಂದ ಹೈರಾಣಾಗಿ ಹೋಗಿದ್ದಾರೆ. ಬಡಾವಣೆಗಳಲ್ಲಿ ನೀರು ತುಂಬಿಕೊಂಡಿದ್ದು ಪ್ರಮುಖ ರಸ್ತೆಗಳೂ ಸಹ ಕೆರೆಯಂತಾಗಿದೆ. ಅದರಲ್ಲೂ ಸಂಚಾರದ ವೇಳೆ ಮಳೆ ಬಂದರೆ ವಾಹನ ಸವಾರರು ರಕ್ಷಣೆಗಾಗಿ ಅಂಡರ್ ಪಾಸ್ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಾರೆ.
ಇದೀಗ ಈ ಕುರಿತಂತೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಮಹತ್ವದ ಹೇಳಿಕೆ ನೀಡಿದ್ದಾರೆ. ಮಳೆಯಾಗುವ ಸಂದರ್ಭದಲ್ಲಿ ಅಂಡರ್ ಪಾಸ್ ಕೆಳಗಡೆ ವಾಹನಗಳನ್ನು ಯಾರೂ ನಿಲ್ಲಿಸಬೇಡಿ ಇದರಿಂದ ಅಪಘಾತಗಳಾಗುತ್ತಿವೆ. ಈಗಾಗಲೇ 3-4 ಅಪಘಾತದ ಪ್ರಕರಣಗಳು ವರದಿಯಾಗಿದ್ದು, ಹೀಗಾಗಿ ಅಂಡರ್ ಪಾಸ್ ಕೆಳಗಡೆ ವಾಹನ ನಿಲ್ಲಿಸಿದರೆ ಅಂತವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
- Advertisement -