ಬೆಳ್ತಂಗಡಿ : ವಿಜಯವಾಣಿ ಹಾಗೂ ದ್ವಿಗ್ವಿಜಯ ನ್ಯೂಸ್ ಸಂಸ್ಥೆಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ 42 ಮಂದಿಯನ್ನು ಗುರುತಿಸಿ ವಿಜಯ ರತ್ನ ಪ್ರಶಸ್ತಿ -2022 ನೀಡಲಾಯಿತು.
ಈ ಪ್ರಶಸ್ತಿ ಕಾರ್ಯಕ್ರಮ ಅಗಸ್ಟ್ 6 ಶನಿವಾರ ಸಂಜೆ ಬೆಂಗಳೂರಿನ ಅಶೋಕ ಹೊಟೇಲಿನಲ್ಲಿ ನಡೆಸಲಾಯಿತು. 42 ಸಾಧಕರಲ್ಲಿ ಒಬ್ಬರಾದ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಸಂಚಾಲಕರಾದ ಉದ್ಯಮಿ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಇವರಿಗೆ ವಿಜಯ ರತ್ನ -2022 ಪ್ರಶಸ್ತಿ ನೀಡಲಾಯಿತು.ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟ ರಮೇಶ್, ಮತ್ತು VRL ಎಮ್.ಡಿ. ಆನಂದ್ ಸಂಕೇಶ್ವರ್ ಅವರು ಪ್ರಶಸ್ತಿಯನ್ನು ಮೋಹನ್ ಕುಮಾರ್ ಅವರಿಗೆ ನೀಡಿದರು.
ಮೋಹನ್ ಕುಮಾರ್ ಜೊತೆ ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಮ್.ಶ್ರೀಧರ್ ಕಲ್ಮಂಜ , ಬೆಳ್ತಂಗಡಿ ವಿಜಯವಾಣಿ ವರದಿಗಾರ ಮನೋಹರ್ ಬಳೆಂಜ, ಯುಪ್ಲಸ್ ಎಮ್.ಡಿ ದಿನೇಶ್ ಕೋಟ್ಯಾನ್, ಲಕ್ಷ್ಮೀ ಗ್ರೂಪ್ಸ್ ಸಿಬ್ಬಂದಿಗಳಾದ ಎಮ್.ರಾಘವೇಂದ್ರ , ಯೋಗೀಶ್ ಕುಲಪ್ಪಳ ಮತ್ತಿತರರು ಜೊತೆಯಲ್ಲಿದ್ದರು.