- Advertisement -
- Advertisement -
ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಇಂದು ಪಂಚೆ ಕಟ್ಟಿ ಗದ್ದೆಯಲ್ಲಿ ಉಳುಮೆ ಮಾಡಿ ನಾಟಿ ಮಾಡಿದ್ದಾರೆ.
ಬೆಳೆಗಾರರು ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಸಿ ಮುಹಿಲನ್ ಕೃಷಿ ಕೆಲಸ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ಕೃಷಿ ಉತ್ತೇಜನಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಲ್ಲೈ ಮುಹಿಲನ್, ಸ್ವತಃ ಭತ್ತದ ಸಸಿ ನಾಟಿ ಮಾಡಿ ಕೆಲವು ಹೊತ್ತು ಗದ್ದೆ ಉಳುಮೆ ಮಾಡಿದ್ದಾರೆ.
ಪ್ರತಿವರ್ಷ ಬೆಳೆಗಾರರು ಸಮಿತಿಯಿಂದ ಕೃಷಿ ಉತ್ತೇಜನಕ್ಕಾಗಿ ಕಾರ್ಯಕ್ರಮ ಅಯೋಜಿಸಲಾಗುತ್ತಿದೆ.
- Advertisement -