- Advertisement -
- Advertisement -
ಬಂಟ್ವಾಳ: ಬೀಳುವ ಹಂತದಲ್ಲಿದೆ ಸೋಡಿಯಂ ವೇ ಲೈಟ್ ಕಂಬ. ಬಿಸಿರೋಡು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸೇತುವೆಯ ಸಮೀಪ ಮಸೀದಿ ಗೆ ಹೋಗುವ ರಸ್ತೆಯ ಬದಿಯಲ್ಲಿರುವ ದಾರಿ ದೀಪದ ಕಂಬ (ಸೋಡಿಯಂ ವೇ ಲೈಟ್) ರಸ್ತೆಗೆ ವಾಲಿ ನಿಂತಿದ್ದು, ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಈ ಲೈಟ್ ಇರುವುದರಿಂದ ಅಪಾಯ ಹೆಚ್ಚಾಗಿದ್ದು, ವಾಹನ ಸವಾರರ ಮೇಲೆ ಬೀಳುವ ಸಂಭವ ಹೆಚ್ಚಾಗಿದೆ.
ಕೂಡಲೇ ಸಂಬಂಧಿಸಿದ ವರು ಈ ಮುರಿದು ಬೀಳುವ ಸೋಡಿಯಂ ವೇ ಲೈಟ್ ಕಂಬವನ್ನು ತೆರವುಗೊಳಿಸುವಂತೆ ಸ್ಥಳೀಯ ರು ಆಗ್ರಹಿಸಿದ್ದಾರೆ.
- Advertisement -