- Advertisement -
- Advertisement -
ಮಂಗಳೂರು: ಕಲ್ಲುಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಘಟನೆ ಮಂಗಳೂರು ನಗರದ ತಲಪಾಡಿ ಮಾದವಪುರದಿಂದ ಸಾಂತ್ಯಕ್ಕೆ ತೆರಳುವ ತಾತ್ಕಾಲಿಕ ಸೇತುವೆಯ ಪಕ್ಕದಲ್ಲಿ ನಡೆದಿದೆ.
ತಾತ್ಕಾಲಿಕವಾಗಿ ನಿರ್ಮಿಸಿರುವ ಸೇತುವೆಯಲ್ಲಿ ಘನವಾಹನಗಳಿಗೆ ಪ್ರವೇಶವಿಲ್ಲ. ಆದರೆ ಲಘು ವಾಹನಗಳಷ್ಟೇ ತೆರಳಲು ಸೂಚನಾ ಫಲಕ ಹಾಕಲಾಗಿದ್ದರೂ, ಟಿಪ್ಪರ್ ಲಾರಿಗಳು ಲೋಕೋಪಯೋಗಿ ಇಲಾಖೆ ಆದೇಶವನ್ನು ಉಲ್ಲಂಘಿಸಿ ಸೇತುವೆಯಲ್ಲಿ ಚಲಿಸಿ ಅನಾಹುತಕ್ಕೆ ಕಾರಣವಾಗುತ್ತಿದೆ. ಈ ಘಟನೆಯಲ್ಲಿ ಲಾರಿ ಚಾಲಕ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ.
- Advertisement -