Friday, June 27, 2025
Homeಕರಾವಳಿಮಂಗಳೂರು: ಬಸ್ ನಲ್ಲಿ ಬಿಟ್ಟುಹೋದ 10 ಸಾವಿರ ಹಣವನ್ನು ಕಮೀಷನರ್ ಗೆ ನೀಡಿದ ಬಸ್ ಚಾಲಕ,...

ಮಂಗಳೂರು: ಬಸ್ ನಲ್ಲಿ ಬಿಟ್ಟುಹೋದ 10 ಸಾವಿರ ಹಣವನ್ನು ಕಮೀಷನರ್ ಗೆ ನೀಡಿದ ಬಸ್ ಚಾಲಕ, ನಿರ್ವಾಹಕ…!!

spot_img
- Advertisement -
- Advertisement -

ಮಂಗಳೂರು: ನಗರದ ಸಿಟಿ ಬಸ್‌ ಚಾಲಕ ಮತ್ತು ನಿರ್ವಾಹಕ ಮಂಗಳೂರು ನಗರದ ಸಿಟಿ ಬಸ್‌ನಲ್ಲಿ ಪ್ರಯಾಣಿಕರೋರ್ವರು ಬಿಟ್ಟು ಹೋದ ಹಣವನ್ನು ಪ್ರಮಾಣಿಕವಾಗಿ ನಗರದ ಪೊಲೀಸ್ ಕಮಿಷನರಿಗೆ ಒಪ್ಪಿಸಿದ ಘಟನೆ ಮಂಗಳೂರಲ್ಲಿಂದು ನಡೆದಿದೆ.

ಮಂಗಳೂರು ತಲಪಾಡಿ ರೂಟ್ ನಲ್ಲಿ ಸಂಚರಿಸುವ 42 ರೂಟ್ ನಂಬರ್ ನ ಮಹೇಶ್ ಬಸ್ (ಶ್ರೇಯಾ – KA19AA3398) ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು 10 ಸಾವಿರ ರೂಪಾಯಿಗಳ ನಗದನ್ನು ಬಸ್ಸಿನಲ್ಲೇ ಬಿಟ್ಟು ಹೋಗಿದ್ದರು.

ತೊಕ್ಕೊಟ್ಟುವಿನಲ್ಲಿ ಬಸ್‌ ಸೀಟಿನಲ್ಲಿದ್ದ ಈ ಹಣವನ್ನು ಗಮನಿಸಿದ ಬಸ್ ನಿರ್ವಾಹಕ ಅಶ್ರಫ್ ಮತ್ತು ಚಾಲಕ ದಿನಕರ್ ಅವರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಆಯುಕ್ತ ಎನ್ ಶಶಿ ಕುಮಾರ್ ರಿಗೆ ಹಸ್ತಾಂತರ ಮಾಡಿದ್ದಾರೆ.

ಸೂಕ್ತ ಸಮಯದಲ್ಲಿ ಪ್ರಾಮಾಣಿಕತೆ ಮೆರೆದ ಇಬ್ಬರೂ ಬಸ್ ಸಿಬ್ಬಂದಿಗಳ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ

- Advertisement -
spot_img

Latest News

error: Content is protected !!