ನ್ಯೂಯಾರ್ಕ್: ಇಲ್ಲಿನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಇತ್ತೀಚೆಗೆ ಅಮೆರಿಕದ ಸಿಯಾಟಲ್ ನಗರದಲ್ಲಿ ಸ್ಥಾಪಿಸಲಾದ ಅವರ ಮಠದ ಒಂಬತ್ತನೇ ಶಾಖೆಯಾದ ವೆಂಕಟಕೃಷ್ಣ ವೃಂದಾವನವನ್ನು ಲೋಕಾರ್ಪಣೆ ಮಾಡಿದರು.
ಅಮೇರಿಕಾ ಸಹ್ಯಾದ್ರಿ ಕನ್ನಡ ಸಂಘದ ಸದಸ್ಯರು ಮತ್ತು ಇತರ ಭಾರತೀಯ ಸಂಸ್ಥೆಗಳು ಹಾಗೂ ಭಕ್ತರು ಕಾರ್ಯಕ್ರಮವನ್ನು ಸಮರ್ಥವಾಗಿ ಆಯೋಜಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಸಂದರ್ಭ ಸಿಯಾಟಲ್ನ ಭಕ್ತರ ಐದು ವರ್ಷಗಳ ಕನಸು ನನಸಾಗುವಲ್ಲಿ ಸಫಲವಾಗಿದೆ ಎಂದು ಸ್ವಾಮೀಜಿಗಳ ಸಾಗರೋತ್ತರ ಸಂಯೋಜಕ ಪ್ರಸನ್ನ ಆಚಾರ್ಯ ಹೇಳಿದರು.
‘ವೆಂಕಟಕೃಷ್ಣ ವೃಂದಾವನ’ ಎಂಬ ಹೆಸರಿನ ಶಾಖಾ ಮಠವು ಇತ್ತೀಚೆಗೆ ಅರ್ಚಕರ ನಿವಾಸದಲ್ಲಿ ಕಾರ್ಯಾರಂಭ ಮಾಡಿದೆ. ಮಠದ ಇಬ್ಬರು ಶಿಷ್ಯರು ಇಲ್ಲಿ ಪೂಜೆ ಸಲ್ಲಿಸಲು ಮತ್ತು ವೈದಿಕ ಆಚರಣೆಗಳಂತಹ ಧಾರ್ಮಿಕ ಅಗತ್ಯಗಳನ್ನು ಪೂರೈಸಲು ನೆಲೆಸುತ್ತಾರೆ ಎಂದು ಪ್ರಸನ್ನ ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧ್ಯಕ್ಷತೆಯಲ್ಲಿ ನಡೆದ ಜಾಗತಿಕ ನಾಯಕರ ವಾಸ್ತವ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚು ಹೆಚ್ಚು ಕೋವಿಡ್ ಲಸಿಕೆ ತಯಾರಿಸಿ ಇತರ ದೇಶಗಳಿಗೆ ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಜನರು ತೋರಿದ ನಿರ್ಲಕ್ಷ್ಯ ಮತ್ತು ಕೆಲವು ಕೌಂಟ್ರಿಗಳಲ್ಲಿ ಲಸಿಕೆಗಳ ಲಭ್ಯತೆಯಿಲ್ಲದ ಕಾರಣ ಎರಡನೇ ಕೋವಿಡ್ ಅಲೆಯು ಹೆಚ್ಚು ತೀವ್ರವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.


