- Advertisement -
- Advertisement -
ಪುತ್ತೂರು: ಕೋಳಿ ತ್ಯಾಜ್ಯದ ಗುಂಡಿ ಮುಚ್ಚುವ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಸಾವನಪ್ಪಿರುವ ಘಟನ ಪುತ್ತೂರಿನ ಆರ್ಲಪದವಿನಲ್ಲಿ ನಡೆದಿದೆ.ಮೃತರನ್ನು ಪಾರ್ಕಳ ಕಾಲನಿ ನಿವಾಸಿಗಳಾದ ರವಿ ಮತ್ತು ಬಾಬು ಎಂದು ಗುರುತಿಸಲಾಗಿದೆ.
ಕೋಳಿ ತ್ಯಾಜ್ಯದ ಗುಂಡಿಯನ್ನು ಮುಚ್ಚುವ ವೇಳೆ ಮಣ್ಣು ಕುಸಿದಿದ್ದು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಣ್ಣಿನಡಿ ಸಿಲುಕಿಕೊಂಡು ಸಾವನಪ್ಪಿದ್ದಾರೆ. ಇನ್ನು ಈ ಮೊದಲು ಬಾವಿ ಕೆಲಸ ಮಾಡುವ ವೇಳೆ ಮಣ್ಣು ಕುಸಿದಿತ್ತು ಅಂತಾ ಹೇಳಲಾಗಿತ್ತು.ಆದ್ರೀಗ ಇದು ಕೋಳಿ ತ್ಯಾಜ್ಯದ ಗುಂಡಿ ಮುಚ್ಚುವ ವೇಳೆ ನಡೆದಿರೋ ದುರಂತ ಅನ್ನೋ ಮಾಹಿತಿ ಲಭ್ಯವಾಗಿದೆ.
- Advertisement -