- Advertisement -
- Advertisement -
ಶಿರಸಿ: ತುಮಕೂರು ಮತ್ತು ಗಂಗಾವತಿಯಲ್ಲಿ ಇಬ್ಬರು ಅಭ್ಯರ್ಥಿಗಳು ಒಂದೇ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಒಂದೊಂದು ಮತವು ಅತ್ಯಂತ ಪ್ರಮುಖವಾಗುತ್ತದೆ ಎಂಬುವುದು ಇಲ್ಲಿ ಎದ್ದು ತೋರುತ್ತಿದೆ. ಶಿರಸಿಯಲ್ಲಿ ತಿರಸ್ಕೃತ ಮತ ಪರಿಶೀಲನೆ ನಡೆಸುವ ವೇಳೆ ಅಭ್ಯರ್ಥಿಯೊಬ್ಬರು ಜಯ ಗಳಿಸಿದ್ದಾರೆ.
ಅಭ್ಯರ್ಥಿ ಟಿ.ವಿ..ಶಿವಕುಮಾರ್ ಅವರಿಗೆ ೧೬೩ ಮತ ಬಂದಿದ್ದು ಪ್ರತಿಸ್ಪರ್ಧಿಯಿಂದ ಒಂದು ಮತ ಅಧಿಕ ಗಳಿಸುವ ಮೂಲಕ ಇವರು ವಿಜೇತ ರಾಗಿದ್ದಾರೆ. ತುಮಕೂರು ತಾಲ್ಲೂಕಿನ ಬುಗಡನಹಳ್ಳಿ ಗ್ರಾಮ ಪಂಚಾಯ್ತಿಯ ಹನುಮಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ವಿ. ಶಿವಕುಮಾರ್ ಕೇವಲ ಒಂದು ಮತದ ಅಂತರದಿಂದ ಸಮೀಪ ಪ್ರತಿ ಸ್ಪರ್ಧಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದಾರೆ
- Advertisement -