- Advertisement -
![]()
- Advertisement -
ಪತಿಯೊಬ್ಬ ತನ್ನ ಹೆಂಡತಿಯನ್ನು ಕಷ್ಟಪಟ್ಟು ಓದಿಸಿ, ಆಸ್ತಿ ಮಾರಿ ಪತ್ನಿಗೆ ಬಿಪಿಎಸ್ಸಿ (BPSC) ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿ, ಆಕೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದು, ಇದೀಗ ಸರ್ಕಾರಿ ಕೆಲಸ ದೊರೆತ ನಂತರ ಗಂಡ, ಮಗನನ್ನು ಮರೆತು ಪತ್ನಿ ಪ್ರಿಯಕರನೊಂದಿಗೆ ಪ್ರತ್ಯೇಕ ಸಂಸಾರ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಹಾಜಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ (ಮೇ.28) ಈ ಘಟನೆ ಬೆಳಕಿಗೆ ಬಂದಿದ್ದು, ಬಿದುಪುರದ ನಿವಾಸಿಯಾಗಿರುವ ಅಮನ್ ಕುಮಾರ್ ಎಂಬುವವರೇ ತನ್ನ ಪತ್ನಿ ಗುಂಜನ್ ಕುಮಾರಿ ವಿರುದ್ಧ ವಂಚನೆ ಆರೋಪ ಹೊರಿಸಿದ್ದಾರೆ. ಇನ್ನು ಸರ್ಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡ ಮಹಿಳೆಯೊಬ್ಬಳು, ಕೆಲಸ ಸಿಗುತ್ತಿದ್ದಂತೆ ತನ್ನನ್ನು ಮತ್ತು ತನ್ನ ಹತ್ತು ವರ್ಷದ ಮಗನನ್ನು ಬೀದಿಗೆ ತಳ್ಳಿದ್ದಾಳೆ ಎಂದು ಆಕೆಯ ಪತಿ ಆಕ್ರೋಶ ಹೊರಹಾಕಿದ್ದಾನೆ.
https://x.com/sirajnoorani/status/2060072001168105886/photo/2

- Advertisement -


