- Advertisement -
- Advertisement -
ಮಂಗಳೂರು : ಸದ್ಯಕ್ಕಂತು ಜಿಲ್ಲೆಯಲ್ಲಿ ಕೊರೊನಾ ಆರ್ಭಟ ತನ್ನಗಾಗುವ ಯಾವ ಲಕ್ಷಣಗಳು ಕೂಡ ಗೋಚರಿಸುತ್ತಿಲ್ಲ. ಇಂದು ದಕ್ಷಿಣಕನ್ನಡದಲ್ಲಿ 173 ಪ್ರಕರಣಗಳು ವರದಿಯಾಗುವ ಮೂಲಕ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6715ಕ್ಕೆ ಏರಿಕೆಯಾಗಿದೆ.

ಇಂದು 11 ಮಂದಿಯನ್ನು ಕೊರೊನಾ ಎಂಬ ಹೆಮ್ಮಾರಿ ತನಗೆ ಬಲಿಯಾಗಿಸಿಕೊಂಡಿದೆ. ಇನ್ನು ಸೋಂಕಿತರೆಲ್ಲರೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇಂದು 107 ಮಂದಿ ಗುಣಮುಖರಾಗಿದ್ದಾರೆ. ಹಾಗೇ ಜಿಲ್ಲೆಯಲ್ಲಿ ಸದ್ಯ 3398 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ ಒಟ್ಟು 3116 ಮಂದಿ ಗುಣಮುಖರಾಗಿದ್ದಾರೆ.
- Advertisement -