- Advertisement -
![]()
- Advertisement -
ಉಡುಪಿ: ಬೈಂದೂರಿನ ಕೆರಾಡಿಯಲ್ಲಿರುವ ರಿಷಬ್ ಶೆಟ್ಟರ ಹಿರಿಯರ ಮನೆಯಲ್ಲಿ ಕುಣಿತ ಭಜನೆ ಹಾಗೂ ಯಕ್ಷಗಾನ ಹರಕೆ ಪ್ರದರ್ಶನ ನಡೆಯಿತು.
ಈ ಹಿಂದೆಯೇ ಹರಕೆ ಹೇಳಿಕೊಂಡಿದ್ದು ಕಳೆದ ವರ್ಷ ಮೇ ತಿಂಗಳಲ್ಲಿ ಈ ಆಚರಣೆ ನಡೆಸಬೇಕಾಗಿತ್ತು. ಆದರೆ ಕಾಂತಾರ ಸಿನಿಮಾ ಶೂಟಿಂಗ್ ಕಾರಣಕ್ಕೆ ಇತ್ತೀಚೆಗೆ ಹರಕೆ ತೀರಿಸಲಾಗಿದೆ. ಇದೆ ವೇಳೆ ಮಾರಣಕಟ್ಟೆ ಮೇಳದ ಹರಕೆಯ ಯಕ್ಷಗಾನ ಪ್ರದರ್ಶನ ಕೂಡ ನಡೆದಿದೆ.
ಇನ್ನು ಒಂದೆರಡು ದಿನದಲ್ಲಿ ಬಹು ನಿರೀಕ್ಷಿತ ಜೈ ಹನುಮಾನ್ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು ಕುಣಿತ ಭಜನೆಯಲ್ಲಿ ಭಾಗವಹಿಸಿದ ತಂಡಗಳಿಗೆ ಚಲನ, ಚಿತ್ರದ ಲೋಗೋ ಹೊಂದಿದ ಟೀ ಶರ್ಟ್ ನೀಡಿ ಚಿತ್ರದ ಪ್ರಮೋಷನ್ ಕೂಡಾ ನಡೆಸಲಾಗಿದೆ.
- Advertisement -


