- Advertisement -
![]()
- Advertisement -
ಬೆಳ್ತಂಗಡಿ; ದೇಶದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಮಧ್ಯೆ ಕೆಲಸ ಮಾಡುವ ಘುಮಂತು ಕಾರ್ಯ ಗತಿವಿಧಿಯ ಅಖಿಲ ಭಾರತ ಮಟ್ಟದ ಬೈಠಕ್ ರಾಜಸ್ಥಾನ ರಾಜ್ಯ ದ ಕೋಟ ದಲ್ಲಿ ನಡೆಯಿತು.
ಈ ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಸಂಪರ್ಕ ಪ್ರಮುಖ್ ಶ್ರೀ ಸುನೀಲ್ ಜಿ ದೇಶಪಾಂಡೆ,ಹಾಗೂ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ ಶ್ರೀ ದುರ್ಗಾದಾಸ್ ಜಿ ಎರಡೂ ದಿನ ಇದ್ದು ಮಾರ್ಗದರ್ಶನ ಮಾಡಿದರು.

ಈ ಭೈಠಕ್ ನಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದಿಂದ ಪ್ರಾಂತ ಪ್ರಮುಖ್ ಶ್ರೀ ಬಾಲಕೃಷ್ಣ ಕಿಣಿ, ಪ್ರಾಂತ ಸಂಯೋಜಕ ಗುರುಗಣೇಶ್ ಬೆಂಗಳೂರು,ಪ್ರಾಂತ ಶಿಕ್ಷಣ ವಿಭಾಗ ಪ್ರಮುಖ್ ಲಕ್ಷ್ಮಣ್ ದಾಸ್ ಬೆಳ್ತಂಗಡಿ,ಪ್ರಾಂತ ಸ್ವಾವಲಂಬನ ವಿಭಾಗ ಪ್ರಮುಖ್ ಸುದರ್ಶನ್ ಕನ್ಯಾಡಿ,ಪ್ರಾಂತ ಮಹಿಳಾ ಕಾರ್ಯ ಪ್ರಮುಖ್ ಸುಭಾದಾಸ್ ಮರವಂತೆ, ಪ್ರಾಂತ ದಾಖಲೀಕರಣ ವಿಭಾಗ ಪ್ರಮುಖ್ ಕುಮುದಾ ಬಿ ಶಿವಮೊಗ್ಗ,ಮತ್ತು ಪ್ರಾಂತ ಯುವ ಕಾರ್ಯ ಪ್ರಮುಖ್ ಮಾರುತಿ ಚಿತ್ರದುರ್ಗ ಇವರು ಭಾಗವಹಿಸಿದರು.
- Advertisement -


