- Advertisement -
![]()
- Advertisement -
ಬೆಳ್ತಂಗಡಿ : ಟಿಪ್ಪರ್ ಹಾಗೂ ಪಿಕಪ್ ವಾಹನದಲ್ಲಿ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನ ಪ್ರವಾಸಕ್ಕೆ ಫೆ.9 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಕುಮಾರ್ ನೇತೃತ್ವದಲ್ಲಿ ಕರೆದುಕೊಂಡು ಹೋಗಿದ್ದ ಪ್ರಕರಣ ಸಂಬಂಧ ಫೆ.12 ರಂದು ಡಿಡಿಪಿಐ ಶಶಿಧರ್ ಅವರು ಬಳೆಂಜ ಶಾಲೆಯ ಶಿಕ್ಷಕ ಕಿರಣ್ ಕುಮಾರ್ ಅವರನ್ನು ಅಮಾನತು ಮಾಡಿದ್ದರು.
ಶಿಕ್ಷಣ ಇಲಾಖೆ ಫೆ.18ರಂದು ಕಳಿಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರಂಜ ಶಾಲೆಯ ಶಿಕ್ಷಕನಾಗಿ ಕಿರಣ್ ಕುಮಾರ್ ರನ್ನು ನೇಮಕ ಮಾಡಿ ಡಿಡಿಪಿಐ ಶಶಿಧರ್ ಅವರು ಆದೇಶ ಹೊರಡಿಸಿದ್ದಾರೆ.
- Advertisement -


