- Advertisement -
- Advertisement -
ಬೆಂಗಳೂರು : ವಾಟ್ಸಾಪ್ ಡಿಪಿಗೆ ಗೆಳೆಯನ ಫೋಟೋ ಹಾಕಿ ಸೈಬರ್ ಕಳ್ಳರು ಸಾಫ್ಟ್ವೇರ್ ಉದ್ಯೋಗಿಗೆ 1.4 ಲಕ್ಷ ರೂ. ವಂಚಿಸಿದ್ದಾರೆ. ಹೆಸರಘಟ್ಟ ರಸ್ತೆಯ ಮಲ್ಲಸಂದ್ರದ ಟೆಕ್ಕಿ ವಂಚನೆಗೆ ಒಳಗಾದವರು. ತಮ್ಮ ಸ್ನೇಹಿತನ ಹೆಸರಿನಲ್ಲಿ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ ಹಣ ಪಡೆದು ಮೋಸ ಮಾಡಿರುವುದಾಗಿ ದೂರು ನೀಡಿರುವುದಾಗಿ ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಸಾಫ್ಟ್ವೇರ್ ಇಂಜಿನಿಯರ್, ಕುಟುಂಬದ ಜತೆ ಮಲ್ಲಸಂದ್ರದಲ್ಲಿ ವಾಸಿಸುತ್ತಿದ್ದಾರೆ. ಜು. 30ರಂದು ಅವರ ಸ್ನೇಹಿತನ ಹೆಸರಿನಲ್ಲಿ ವಾಟ್ಸಾಪ್ ನಲ್ಲಿ ಸಂದೇಶ ಬಂದಿದೆ. ‘ಅನಾರೋಗ್ಯ ಸಂಬಂಧ ತುರ್ತಾಗಿ 3 ಲಕ್ಷ ರೂ. ಬೇಕಿದೆ ಎಂದು ಸಂದೇಶವಿತ್ತು. ವಾಟ್ಸಾಪ್ ನಲ್ಲಿ ಡಿಪಿ ಕಾರಣಕ್ಕೆ ಗೆಳೆಯನದ್ದೇ ಎಂದು ನಂಬಿ 1.4 ಲಕ್ಷ ರೂ. ಗಳನ್ನು ಆತ ನೀಡಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಮರುದಿನ ಗೆಳೆಯನ ಯೋಗಕ್ಷೇಮ ವಿಚಾರಣೆಗೆ ಕರೆ ಮಾಡಿದಾಗಲೇ ವಂಚನೆ ನಡೆದಿರುವುದು ಗೊತ್ತಾಗಿದೆ.
- Advertisement -