- Advertisement -
![]()
- Advertisement -
ಭಟ್ಕಳ: ಮೀನುಗಾರಿಕೆ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಟ್ಕಳದ ಮಾವಿನಕುರ್ವೆ ಬಂದರ್ ಬಳಿ ನಡೆದಿದೆ. ಶ್ರೀಧರ್ ಪರಮೇಶ್ವರ್ ಖಾರ್ವಿ ಮೃತ ದುರ್ದೈವಿ.
ಶ್ರೀಧರ್ ಅವರು ಮೀನುಗಾರಿಕೆಗಾಗಿ ಮಾವಿನಕುರ್ವೆ ಬಂದರ್ ನಿಂದ ಸುಮಾರು 15 ಕಿ.ಮೀ ಸಮುದ್ರಕ್ಕೆ ಹೋಗಿದ್ದರು, ಆದರೆ ಮೀನುಗಾರಿಕಾ ಬಲೆಗಳನ್ನು ಎಳೆಯುವಾಗ ಆಯತಪ್ಪಿ ನೀರಿಗೆ ಬಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -


