Thursday, June 4, 2026
Homeಕರಾವಳಿಮಂಗಳೂರುವಿಟ್ಲ: ಎರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ವಿಟ್ಲ: ಎರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

- Advertisement -
- Advertisement -

ವಿಟ್ಲ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ತಾಲೂಕಿನ ಕೂಳೂರು ಗ್ರಾಮದ ನಿವಾಸಿ ”  ಅಶ್ರಫ್   @ ಚಿಲ್ಲಿ ಅಶ್ರಫ್  ( 32) ಬಂಧಿತ ಆರೋಪಿ.

ಈತ ಮೇಲೆ  07- 08-2015  ರಂದು ವಿಟ್ಲಪೇಟೆಯಲ್ಲಿ   ಜಗದೀಶ್ ಕಾಮತ್ ಎಂಬವರಿಗೆ ಮೆಣಸಿನ ಪುಡಿಯ ಎರಚಿ  ದರೋಡೆ  ಪ್ರಕರಣ  ದಾಖಲಾಗಿತ್ತು.ಈ ಪ್ರಕರಣದಲ್ಲಿ ದಸ್ತಗಿರಿಯಾಗದೇ ಈತ  ತಲೆಮರೆಸಿ ಕೊಂಡಿದ್ದ.  ಈ ಬಗ್ಗೆ   LPC – 03/2025  ರಂತೆ  ವಾರೆಂಟ್  ಜಾರಿಯಾಗಿರುತ್ತು.

ಇನ್ನು  23-01-2016 ರಂದು ಕೊಲ್ನಾಡು  ಗ್ರಾಮದ  ವೈನ್ ಶಾಪ್ ನ ಬಾಗಿಲು ಮುರಿದು  ನಗದು ಕಳ್ಳತನ ಮಾಡಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದು,  ಈ ಪ್ರಕರಣದಲ್ಲೂ ದಸ್ತಗಿರಿಯಾಗದೆ ತಲೆಮರೆಸಿ ಕೊಂಡಿದ್ದ.  ಈ ಬಗ್ಗೆ ನ್ಯಾಯಾಲಯದಿಂದ   82 &  83 ವಾರಂಟ್ ಜಾರಿಯಾಗಿತ್ತು. ಅದರಂತೆ    ದಿನಾಂಕ  21-09-2025   ಕೂಳೂರು ಮಂಜೇಶ್ವರ ಎಂಬಲ್ಲಿ ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ   ಹಾಜರು ಪಡಿಸಿದ್ದು ಆರೋಪಿಗೆ   ನ್ಯಾಯಾಂಗ  ಬಂಧನ   ವಿಧಿಸಲಾಗಿದೆ.

- Advertisement -

Latest News

error: Content is protected !!