Saturday, June 6, 2026
Homeಕರಾವಳಿನಾನು ಹೇಳಿದ್ದು ಸುಳ್ಳು:ಗಿರೀಶ್ ಮಟ್ಟಣ್ಣನವರ್ ಜಯಂತ ಟಿ ಹೇಳಿದಂತೆ ಮಾಡಿದೆ: ಅನನ್ಯ ಭಟ್ ನಾಪತ್ತೆ ಪ್ರಕರಣ...

ನಾನು ಹೇಳಿದ್ದು ಸುಳ್ಳು:ಗಿರೀಶ್ ಮಟ್ಟಣ್ಣನವರ್ ಜಯಂತ ಟಿ ಹೇಳಿದಂತೆ ಮಾಡಿದೆ: ಅನನ್ಯ ಭಟ್ ನಾಪತ್ತೆ ಪ್ರಕರಣ ಕಟ್ಟುಕಥೆ ಎಂದ ಸುಜಾತ ಭಟ್

- Advertisement -
- Advertisement -

ಬೆಳ್ತಂಗಡಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಅನನ್ಯ ಭಟ್ ನಾಪತ್ತೆ ಪ್ರಕರಣ ತಿರುವು ಪಡೆದುಕೊಂಡಿದೆ.ಅನನ್ಯ ಭಟ್ ನಾಪತ್ತೆ ಪ್ರಕರಣ ಕಟ್ಟುಕಥೆ, ನನ್ನ ಮಗಳು ಅಲ್ಲ ಮೊನ್ನೆ ತೋರಿಸಿದ ಪೋಟೋ ನಕಲಿ ಎಂದು ಅನನ್ಯ ಭಟ್ ತಾಯಿ ಎಂದಿದ್ದ ಸುಜಾತ ಭಟ್ ಆ.22 ರಂದು ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಉಡುಪಿಯಲ್ಲಿ ಜಾಗವಿದ್ದು ನನ್ನ ಗಮನಕ್ಕೆ ಬಾರದೆ ಈ ಜಾಗ ಮಾರಾಟ ಮಾಡಲಾಗಿತ್ತು. ಈ ಜಾಗ ಮತ್ತೆ ನಿಮಗೆ ಸಿಗುವಂತಾಗಲು ಈ ರೀತಿ ಮಾಡಬೇಕು ಎಂದು ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ ಟಿ ತಿಳಿಸಿದ್ದು, ಅದರಂತೆ ನಾನು ನಡೆದುಕೊಂಡಿದ್ದೇನೆ ನನಗೆ ಯಾವುದೇ ಮಗಳು ಇರುವುದಿಲ್ಲ ಇದೆಲ್ಲ ಕಟ್ಟು ಕಥೆಯಾಗಿದೆ ಎಂಬ ಬಗ್ಗೆ ತಿಳಿಸಿದರಲ್ಲದೇ ಹಿಂದೂ ದೇವಸ್ಥಾನ ಜೈನರಿಗೆ ಹೋಗುವುದು ಇಷ್ಟವಿಲ್ಲ ಎಂಬ ಬಗ್ಗೆಯೂ ಮಾತನಾಡಿದ್ದಾರೆ.‌ಕೊನೆಗೂ ಕುತೂಹಲ ಕೆರಳಿಸಿದ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

- Advertisement -

Latest News

error: Content is protected !!