Saturday, June 6, 2026
Homeತಾಜಾ ಸುದ್ದಿಕೆಎಸ್‌ಆರ್‌ಟಿಸಿಯ ಎರಡು ಬಸ್‌ಗಳ ನಡುವೆ ಢಿಕ್ಕಿ: ಓರ್ವ ಚಾಲಕನ ಸಹಿತ 25 ಮಂದಿ ಗಾಯ

ಕೆಎಸ್‌ಆರ್‌ಟಿಸಿಯ ಎರಡು ಬಸ್‌ಗಳ ನಡುವೆ ಢಿಕ್ಕಿ: ಓರ್ವ ಚಾಲಕನ ಸಹಿತ 25 ಮಂದಿ ಗಾಯ

- Advertisement -
- Advertisement -

ನೆಲ್ಯಾಡಿ: ಸಕಲೇಶಪುರ ತಾಲೂಕು ಶಿರಾಡಿ ಘಾಟಿಯ ಮಾರನಹಳ್ಳಿ ಬಳಿ ಕೆಎಸ್ಸಾರ್ಟಿಸಿಯ ಎರಡು ಬಸ್‌ಗಳ ನಡುವೆ ಗುರುವಾರ ಮಧ್ಯಾಹ್ನ ಢಿಕ್ಕಿ ಸಂಭವಿಸಿ ಓರ್ವ ಚಾಲಕನ ಸಹಿತ 25 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಒಬ್ಬ ಬಸ್‌ ಚಾಲಕನಿಗೆ ಗಂಭೀರ ಪೆಟ್ಟಾಗಿದ್ದು, 8  ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಒಂದು ಬಸ್‌ ಬೆಂಗಳೂರಿನಿಂದ ಮಂಗಳೂರಿಗೆ, ಮತ್ತೂಂದು ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುತ್ತಿದ್ದವು. ಗಾಯಾಳುಗಳನ್ನು ಸಕಲೇಶಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!