Saturday, June 6, 2026
Homeತಾಜಾ ಸುದ್ದಿಆರ್ ಸಿ ಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾಗಿ 11 ಜನ ಸಾವನ್ನಪ್ಪಿದ ಪ್ರಕರಣ; ದುರಂತದ ಹೊಣೆ...

ಆರ್ ಸಿ ಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾಗಿ 11 ಜನ ಸಾವನ್ನಪ್ಪಿದ ಪ್ರಕರಣ; ದುರಂತದ ಹೊಣೆ ಹೊರಲು ಸರ್ಕಾರ ಸಿದ್ಧ  ಎಂದ ಡಿಸಿಎಂ ಡಿಕೆಶಿ

- Advertisement -
- Advertisement -

ಬೆಂಗಳೂರು: ಆರ್ ಸಿ ಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾಗಿ 11 ಜನ ಸಾವನ್ನಪ್ಪಿದ ದುರಂತದ ಹೊಣೆ ಹೊರಲು ಸರ್ಕಾರ ಸಿದ್ಧ  ಎಂದ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕಾಲ್ತುಳಿತ ದುರಂತದ ಹೊಣೆ ಹೊರಲು ಸರ್ಕಾರ ಸಿದ್ಧವಾಗಿದೆ. ಇಲ್ಲಿ ರಾಜಕೀಯ ಬೇಡ ಎಂದಿದ್ದು, ಈ ಸಮಯದಲ್ಲಿ ರಾಜಕೀಯಕ್ಕಿಂತಲೂ ಆ ಕುಟುಂಬದವರ ಜೊತೆಗೆ ನಾವು ನಿಲ್ಲುವುದು ಮುಖ್ಯ ಎಂದಿದ್ದಾರೆ.

ಹೀಗಾಗುತ್ತದೆ ಎಂದು ಯೋಚಿಸಿರಲಿಲ್ಲ, ಜನ ಹೆಚ್ಚಾಗುತ್ತಿದ್ದಂತೆ ಮೆಟ್ರೋ ಸಂಚಾರ ಕೂಡ ನಿಲ್ಲಿಸಿದ್ದೆವು ಆದರೂ ಈ ರೀತಿ ಆಗಿರುವುದು ಎಲ್ಲರಿಗೂ ದುಃಖ ತಂದಿದ್ದು, ರಾಜ್ಯ ಸರ್ಕಾರ ಈ ದುರಂತದ ಹೊಣೆ ಹೊರುತ್ತದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!