- Advertisement -
- Advertisement -
ಸುಬ್ರಮಣ್ಯ; ಕುಮಾರಧಾರ ಬಳಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿ ನಡೆದಿದೆ.
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ನಿವಾಸಿ ಬಾಲಚಂದ್ರ ಗೌಡ (38) ಮೃತ ವ್ಯಕ್ತಿ.
ಬಾಲಚಂದ್ರ ಗೌಡ ಅವರು ಕಡಬ ಕಾಲೇಜ್ ರಸ್ತೆಯ ಬೆಸ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಗುರುಶ್ರೀ ಆಗ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಪ್ರಾಮಾಣಿಕತೆ ಮತ್ತು ಸ್ನೇಹಭಾವದಿಂದ ಎಲ್ಲರೊಂದಿಗೂ ಬೆರೆತು ಅಪಾರ ಸ್ನೇಹಿತ ಬಳಗ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
- Advertisement -