Friday, June 27, 2025
Homeತಾಜಾ ಸುದ್ದಿಸುಹಾಸ್ ಶೆಟ್ಟಿ ಹತ್ಯೆ ಆಗುವುದು ಬಜ್ಪೆ ಪೊಲೀಸರಿಗೆ ಮೊದಲೇ ಗೊತ್ತಿತ್ತು: ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ...

ಸುಹಾಸ್ ಶೆಟ್ಟಿ ಹತ್ಯೆ ಆಗುವುದು ಬಜ್ಪೆ ಪೊಲೀಸರಿಗೆ ಮೊದಲೇ ಗೊತ್ತಿತ್ತು: ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ ಆರೋಪ

spot_img
- Advertisement -
- Advertisement -

ಬೆಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಆಗುವುದು ಬಜ್ಪೆ ಪೊಲೀಸರಿಗೆ ಮೊದಲೇ ಗೊತ್ತಿತ್ತು ಎಂದು ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸುಹಾಸ್ ಆತ್ಮರಕ್ಷಣೆಗಾಗಿ ಇರಿಸಿಕೊಂಡಿದ್ದ ಅಸ್ತ್ರಗಳನ್ನು ತೆಗೆಸಿದ್ದರು. ಸುಹಾಸ್ ಕೊಲೆ ಆದ ಬಳಿಕ ಸ್ಪೀಕರ್ ಯು.ಟಿ. ಖಾದರ್ ಫಾಝಿಲ್ ಕುಟುಂಬದ ಕೈವಾಡ ಇಲ್ಲ ಎಂದಿದ್ದಾರೆ. ಹತ್ಯೆಯ ಮರುದಿನ ಖಾದರ್ ಹೇಗೆ ಮಾತಾಡಿದರು?. ಅಂದರೆ ನಿಮಗೆ ಮೊದಲೇ ಗೊತ್ತಿತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕೇಸ್ ಡೈವರ್ಟ್ ಮಾಡಲು ಖಾದರ್ ಮೂಲ ಕಾರಣ. ಮಂಗಳೂರಿನಲ್ಲಿ ಖಾದರ್ ಮೂಗಿನ ಅಡಿಯಲ್ಲಿ ಹಲವಾರು ಘಟನೆಗಳು ನಡೆಯುತ್ತಿವೆ. ಅಪರಾಧಿಗಳ ರಕ್ಷಣೆಯಲ್ಲಿ ಖಾದರ್ ತೊಡಗಿಸಿಕೊಂಡಿದ್ದಾರೆ. ಫಾಜಿಲ್ ಕುಟುಂಬಕ್ಕೆ ಸರ್ಕಾರ ಕೊಟ್ಟ 25 ಲಕ್ಷ ರೂ. ಪರಿಹಾರದ ಹಣ ಹತ್ಯೆಗೆ ಸುಪಾರಿಯಾಗಿ ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ.

ರೌಡಿ ಶೀಟರ್ ಹಿಂದೂ ಸಂಘಟನೆ ಸೇರುತ್ತಿದ್ದಾರೆ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ದಿನೇಶ್ ಗುಂಡೂರಾವ್ ಏನು ಮಾತಾಡುತ್ತಿದ್ದೀರಿ?. ನಾವೆಲ್ಲರೂ ಹಿಂದೂ ಸಂಘಟನೆಯವರು, ತಾಕತ್ ಇದ್ಯಾ ನಿಮಗೆ ಕೇಸ್ ಹಾಕಲು?. ನಾನು ಮೊದಲು ಹಿಂದೂ ಸಂಘಟನೆಯವಳು, ನಂತರ ಬಿಜೆಪಿ. ನಿಮಗೆ ತಾಕತ್ ಇದ್ದರೆ ನನ್ನ ಮೇಲೆ ಕೇಸ್ ಹಾಕಿ, ಹಾಕಬೇಕು ನೀವು. ಮಂಗಳೂರಿನಲ್ಲಿ ಮುಸಲ್ಮಾನ ಮುಖಂಡರು ನಿಮಗೆ ಬೆದರಿಕೆ ಹಾಕುತ್ತಾರೆ. ಬಜ್ಪೆ ಠಾಣೆ ಕಾನ್ ಸ್ಟೇಬಲ್ ರಶೀದ್ ಗೆ ಸುಹಾಸ್ ಹತ್ಯೆ ಗೊತ್ತಿತ್ತು. ರಶೀದ್ ಮಂಪರು ಪರೀಕ್ಷೆ ಆಗಬೇಕು, ಅರೆಸ್ಟ್ ‌ಮಾಡಬೇಕು ಎಂದು ಆಗ್ರಹಿಸಿದ್ದಾರೆ.

 ಸುಹಾಸ್ ಹತ್ಯೆಯಲ್ಲಿ ರಶೀದ್ ಕೈವಾಡ ಇದೆ ಎಂದು ನಮ್ಮ ಆರೋಪ ಇದೆ . ಸಿದ್ದರಾಮಯ್ಯನವರೇ ಪರಮೇಶ್ವರ್, ದಿನೇಶ್ ಗುಂಡೂರಾವ್ ರನ್ನು ಸಂಪುಟದಿಂದ ಕೈಬಿಡಿ. ಖಾದರ್ ಅವರಿಗೆ ಸ್ಪೀಕರ್ ಪೀಠದಲ್ಲಿ ಕೂರುವ ನೈತಿಕತೆ ಇಲ್ಲ. ಕಾಸರಗೋಡಿನಿಂದ ತಮ್ಮ ಕ್ಷೇತ್ರದಿಂದ‌ ಹಾದು ಬರಲು ಖಾದರ್ ಅವಕಾಶ ಮಾಡಿಕೊಡುತ್ತಾರೆ. ಸುಹಾಸ್ ಕೊಲೆಗೆ ಮಧ್ಯಪ್ರಾಚ್ಯದಿಂದ ಹಣ ಬಂದಿದೆ ಎಂಬ ಮಾಹಿತಿ ಇದೆ. ಕೇರಳದಿಂದ ಜನ ಬಂದಿದ್ದಾರೆ ಎಂಬ ಮಾಹಿತಿ ಇದೆ. ಸುಹಾಸ್ ಕೊಲೆ ಪ್ರಕರಣವನ್ನು ಎನ್ ಐಎಗೆ ಕೊಡಬೇಕು.ನಾನು ಅಮಿತ್ ಶಾ ಜೊತೆ ಮಾತಾಡಿದ್ದೇನೆ. ಶರಣ್ ಪಂಪ್ ವೆಲ್, ಭರತ್ ಕುಮ್ಡೇಲ್ ಗೆ ಬೆದರಿಕೆ ಬಂದಿದೆ. ಪರಮೇಶ್ವರ್ ನಾಲಾಯಕ್ ಗೃಹ ಮಂತ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -
spot_img

Latest News

error: Content is protected !!