ಸುರತ್ಕಲ್: ಶ್ರೀಕ್ಷೇತ್ರದ ಜೀರ್ಣೋದ್ದಾರದ ನಿಮಿತ್ತವಾಗಿ ದೈವಗಳ ಸಂಕೋಚ ಪ್ರಕ್ರಿಯೆ ಮತ್ತು ಬಾಲಾಲಯ ಪ್ರತಿಷ್ಠೆಯ ಪೂರ್ವಭಾವಿ ವೈದಿಕ ಪೂಜಾ ಕಾರ್ಯಕ್ರಮಗಳು ದಿನಾಂಕ 10.05.2025 ನೇ ಶನಿವಾರ ಬೆಳಿಗ್ಗೆಯಿಂದ 11.05.2025 ನೇ ರವಿವಾರದ ತನಕ ಜರುಗಲಿದೆ.
ಈ ಪುಣ್ಯಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾದಿಗಳು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಭಾಗವಹಿಸಿ ಶ್ರೀದೈವಗಳ ಅನುಗ್ರಹದ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀಜಗನ್ನಾಥ ಅತ್ತಾರ್
ಗಡಿ ಪ್ರಧಾನರು ಕೊಡಿಪಾಡಿ ಬಾಳಿಕೆ ಸುರತ್ಕಲ್ ಹಾಗೂ ಕೊಡಿಪಾಡಿ ಸುರತ್ಕಲ್ ನ ಶ್ರೀಕೊಡಮಣಿತ್ತಾಯ ಶ್ರೀಬ್ರಹ್ಮ-ಬೈದರ್ಕಳ ಸೇವಾ ಸಮಿತಿ(ರಿ) ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಮತ್ತು ಊರ ಪರವೂರ ಭಕ್ತಾದಿಗಳು, ಹತ್ತು ಸಮಸ್ತರು ಕೊಡಿಪಾಡಿ ಗ್ರಾಮಸ್ಥರು ಕೋರಿದ್ದಾರೆ.
ಕಾರ್ಯಕ್ರಮದ ವಿವರಗಳು: ಶ್ರೀಕೊಡಮಣಿತ್ತಾಯ ಶ್ರೀಬ್ರಹ್ಮ-ಬೈದರ್ಕಳ ಗರೋಡಿ ಕೊಡಿಪಾಡಿ ಸುರತ್ಕಲ್ ಕ್ಷೇತ್ರದಲ್ಲಿ 10.05.2025 ಶನಿವಾರ ಬೆಳಿಗ್ಗೆ 8.00 ರಿಂದ ಪವಮಾನ ಹೋಮ, ಹಿರಿಯರಿಗೆ ಪಿಂಡ ಪ್ರಧಾನ ಸರ್ವ ಪ್ರಾಯಶ್ಚಿತ ರೂಪವಾಗಿ ‘ರುದ್ರಯಾಗ’, ಸಂಜೆ 4.00 ರಿಂದ ದುರ್ಗಾ ನಮಸ್ಕಾರ ಪೂಜೆ, ಬಾಲಾಲಯದಲ್ಲಿ ವಾಸ್ತು ಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ 11.05.2025 ರವಿವಾರ
ಬೆಳಿಗ್ಗೆ 7.00 ರಿಂದ ಕೊಡಿಪಾಡಿ ಬಾಳಿಕೆ ಮನೆಯಿಂದ ಶ್ರೀದೈವಗಳ ಭಂಡಾರ ಬಂದು ಗರೋಡಿಯಲ್ಲಿ ಗಣಯಾಗ, ನವಕ ಪ್ರಧಾನ ಹೋಮ, ಕಲಶಾಧಿವಾಸ ಶ್ರೀದೈವಗಳ ದರ್ಶನ ಸೇವೆ ಅಭಯನುಡಿ, ಬಾಲಾಲಯ ಪ್ರತಿಷ್ಠೆ, ಪ್ರಸನ್ನ ಪೂಜೆ ನೆರವೇರಲಿದೆ.