- Advertisement -
- Advertisement -
ಮಂಗಳೂರು; ಕರಾವಳಿಯಲ್ಲೂ ಪೆಂಗಲ್ ಚಂಡಮಾರುತ ಎಫೆಕ್ಟ್ ಜೋರಾಗಿದ್ದು ಭಾರೀ ಮಳೆಗೆ ಬಜಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದೆ. ಕೆಂಜಾರಿನಿಂದ ಅದ್ಯಪಾಡಿಗೆ ಹೋಗುವ ರಸ್ತೆಯಲ್ಲಿ ಸಂಕೇಶ ಸಮೀಪ ಗುಡ್ಡ ಕುಸಿತ ಆಗಿದೆ.
ಭೂಕಸಿತ ಹಿನ್ನೆಲೆಯಲ್ಲಿ ಬಜಪೆ ಮತ್ತು ಅದ್ಯಪಾಡಿಯ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ. ಮಂಗಳೂರು ವಿಮಾನ ನಿಲ್ದಾಣ ಕೆಲ ಭಾಗದ ಅದ್ಯಪಾಡಿ ಪ್ರದೇಶದಲ್ಲಿ ಈ ಭೂಕುಸಿತ ಸಂಭವಿಸಿದೆ.ಉಮಾನಾಥ ಸಾಲಿಯಾನ್ ಎಂಬುವವರಿಗೆ ಸೇರಿದ ಮನೆಗೂ ಹಾನಿ ಉಂಟಾಗಿದ್ದು, ಮನೆ ಮುಂಭಾಗದ ಅಂಗಳದಲ್ಲಿ ಮಣ್ಣು ಕೆಸರು ಸಂಪೂರ್ಣವಾಗಿ ತುಂಬಿಕೊಂಡಿದೆ. ಸದ್ಯ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
- Advertisement -