Friday, June 27, 2025
Homeಕರಾವಳಿಮಂಗಳೂರುಮಂಗಳೂರು; ಮಳೆಯ ರಜೆ ಫುಲ್ ಎಂಜಾಯ್ ಮಾಡಿ ನಾಳೆ ಸ ರಜೆ ಉಂಟಾ ಎನ್ನುತ್ತಿದ್ದ ಮಕ್ಕಳಿಗೆ...

ಮಂಗಳೂರು; ಮಳೆಯ ರಜೆ ಫುಲ್ ಎಂಜಾಯ್ ಮಾಡಿ ನಾಳೆ ಸ ರಜೆ ಉಂಟಾ ಎನ್ನುತ್ತಿದ್ದ ಮಕ್ಕಳಿಗೆ ಬಿಗ್ ಶಾಕ್: ಮುಂದಿನ 26 ಶನಿವಾರ ಫುಲ್ ಡೇ ಕ್ಲಾಸ್ ಮಾಡಲು ಚಿಂತನೆ

spot_img
- Advertisement -
- Advertisement -

ಮಂಗಳೂರು; ಮಳೆಯ ರಜೆ ಫುಲ್ ಎಂಜಾಯ್ ಇನ್ನು ರಜೆ ಉಂಟಾ ಎನ್ನುತ್ತಿದ್ದ ಮಕ್ಕಳಿಗೆ  ಇದೀಗ ಜಿಲ್ಲಾಡಳಿತ ಬಿಗ್ ಶಾಕ್ ಕೊಟ್ಟಿದೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲಾಡಳಿತ ಮಳೆಗಾಗಿಯೇ 13 ದಿನ ರಜೆ ಕೊಟ್ಟಿದೆ. ಹೀಗಾಗಿ  ಈ ರಜೆಯನ್ನು ಸರಿದೂಗಿಸಲು ಮುಂದಿನ 26 ಶನಿವಾರ ಫುಲ್ ಡೇ ಕ್ಲಾಸ್ ಮಾಡಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಶಿಕ್ಷಣ ಇಲಾಖೆ ಮುಂದಿನ 26 ಶನಿವಾರಗಳಂದು ಫುಲ್ ಡೇ  ತರಗತಿಗಳನ್ನು ನಡೆಸಲು ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ.  ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ರಜೆ ನೀಡುವಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಈ ರಜಾದಿನಗಳು ಪಾಠದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಆ ಸಮಸ್ಯೆಯನ್ನು ಸರಿಪಡಿಸಲು ಶನಿವಾರ ಫುಲ್ ಡೇ ಕ್ಲಾಸ್ ಮಾಡಲು ಪ್ಲ್ಯಾನ್ ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಇನ್ನು ಪಿಯು ಕಾಲೇಜುಗಳಿಗೆ ಶನಿವಾರ ಮತ್ತು ಭಾನುವಾರ ಪೂರ್ಣ ದಿನ ತರಗತಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಆದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಇಟಿ, ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ತರಬೇತಿಗೆ ಹಾಜರಾಗುವುದರಿಂದ ಅವರು ಭಾನುವಾರದ ತರಗತಿಗಳಿಗೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೆಲವು ಕಾಲೇಜುಗಳು ಈಗಾಗಲೇ ಶನಿವಾರ ಪೂರ್ಣ ದಿನ ತರಗತಿಗಳನ್ನು ನಡೆಸಲು ಪ್ರಾರಂಭಿಸಿವೆ. ಬೇರೆ ಕಾಲೇಜುಗಳು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿವೆ. ಈ ಕುರಿತು ಮಾತನಾಡಿದ ಡಿಡಿಪಿಯು, ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿ ಶಿಕ್ಷಣದ ಮುಖ್ಯ ಹಂತಗಳಾಗಿವೆ. ಈ ವರ್ಷದ ಮಾನ್ಸೂನ್ ರಜಾದಿನಗಳು ಈ ವರ್ಗಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಹಾಗಾಗಿ ಎಸ್ಎಸ್ಎಲ್‌ಸಿಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಒಂದು ಗಂಟೆ ವಿಶೇಷ ತರಗತಿ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶಾಲೆಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಪಿಯು ಕಾಲೇಜುಗಳಿಗೆ ಅಗತ್ಯವಿದ್ದಲ್ಲಿ ಶನಿವಾರ ಪೂರ್ಣ ದಿನ ಹಾಗೂ ಭಾನುವಾರ ಅರ್ಧ ದಿನ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದರು. ಅಲ್ಲದೇ ಮಳೆ ನಿಂತ ಕೂಡಲೇ ಶನಿವಾರ ಪೂರ್ಣ ದಿನ ತರಗತಿ ನಡೆಸಲು ಸೂಚನೆ ನೀಡುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ತಾಲೂಕುಗಳಲ್ಲಿ ಹೆಚ್ಚುವರಿ ರಜೆ ಘೋಷಿಸಲಾಗಿದೆ. ಹಾಗಾಗಿ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ನಿರ್ಧಾರಕ್ಕೆ ಬರಲು ತೀರ್ಮಾನಿಸಿದ್ದಾರೆ.  ಸಪ್ಟಂಬರ್ ನಿಂದ ಶನಿವಾರ ತರಗತಿಗಳು ಪ್ರಾರಂಭವಾದರೆ ಅದು  ಫೆಬ್ರವರಿ ಅಂತ್ಯದವರೆಗೆ ಮುಂದುವರಿಯುತ್ತದೆ ಎನ್ನಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ದಸರಾ ಮತ್ತು ಕ್ರಿಸ್‌ಮಸ್ ರಜೆಯನ್ನು ಕಡಿತಗೊಳಿಸಬಹುದು ಎನ್ನಲಾಗಿದೆ.

- Advertisement -
spot_img

Latest News

error: Content is protected !!