Saturday, June 28, 2025
Homeಕರಾವಳಿಬೆಳ್ತಂಗಡಿ :ಬಂಗೇರರ '3 ಸ್ಟಾರ್ ವೈನ್ಸ್' ಶಾಪ್ ಗೆ ಬೀಗ ಜಡಿದ ಪ್ರಕರಣ;ಪತ್ನಿ ಹೆಸರಲ್ಲಿ ಮಾಲೀಕತ್ವ...

ಬೆಳ್ತಂಗಡಿ :ಬಂಗೇರರ ‘3 ಸ್ಟಾರ್ ವೈನ್ಸ್’ ಶಾಪ್ ಗೆ ಬೀಗ ಜಡಿದ ಪ್ರಕರಣ;ಪತ್ನಿ ಹೆಸರಲ್ಲಿ ಮಾಲೀಕತ್ವ ಬದಲಾವಣೆಗೆ ನೀಡಿದ್ದ ಅರ್ಜಿ ರಿಜೆಕ್ಟ್

spot_img
- Advertisement -
- Advertisement -

ಬೆಳ್ತಂಗಡಿ : ಮಾಜಿ ಶಾಸಕ ವಸಂತ ಬಂಗೇರ ನಿಧನದ ಬಳಿಕ ಕಾನೂನು ಪ್ರಕಾರ ಮಾಲೀಕತ್ವ ಬದಲಾಯಿಸದ ಕಾರಣದಿಂದ ಬೆಳ್ತಂಗಡಿ ಅಬಕಾರಿ ಇಲಾಖೆ ವೈನ್ಸ್ ಶಾಪ್ ಗೆ ಬೀಗ ಹಾಕಿ ಸಿಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕತ್ವ ಬದಲಾವಣೆಗೆ ಪತ್ನಿ ಹೆಸರಿನಲ್ಲಿ ನೀಡಿದ್ದ ಅರ್ಜಿಗೆ ಮಕ್ಕಳ ನೇರ ಆಕ್ಷೇಪದಿಂದ ಬೆಂಗಳೂರು ಅಬಕಾರಿ ಇಲಾಖೆಯ ಕಮೀಷನರ್ ಫೈಲ್ ರಿಜೆಕ್ಟ್ ಮಾಡಿದ್ದಾರೆ.

ಪ್ರಕರಣದ ವಿವರ: ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿರುವ ಗುರುನಾರಾಯಣ ಟ್ರಸ್ಟ್ ನ ಸೇರಿದ ಕಟ್ಟಡದ ನೆಲಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ದಿವಂಗತ ಮಾಜಿ ಶಾಸಕ ಕೆ.ವಸಂತ ಬಂಗೇರರ ಮಾಲೀಕತ್ವದ ‘3 ಸ್ಟಾರ್ ವೈನ್ಸ್ ಶಾಪ್’ ಗೆ  ಮಾಲೀಕತ್ವ ಬದಲಾವಣೆ ಮಾಡದ ಕಾರಣದಿಂದ ಬೆಳ್ತಂಗಡಿ ಅಬಕಾರಿ ಇಲಾಖೆ ಜೂ.22 ರಂದು ಸಂಜೆ 6 ಗಂಟೆಗೆ ಬೀಗ ಹಾಕಿ ಸಿಲ್ ಹಾಕಿ ಕಾನೂನು ಕ್ರಮ ಕೈಗೊಂಡಿದ್ದರು.

ಅಬಕಾರಿ ಕಾನೂನು: ಕರ್ನಾಟಕ ಅಬಕಾರಿ ಕಾನೂನು ಪ್ರಕಾರ ಅಬಕಾರಿ ಮಧ್ಯ ಮಾರಾಟ ಮಾಡುವ ಮಾಲೀಕ ಮರಣದ ಬಳಿಕ 45 ದಿನದ ಒಳಗಡೆ ಕುಟುಂಬದ ಪತ್ನಿ ಅಥವಾ ಮಕ್ಕಳ ಹೆಸರಿಗೆ ಮಾಲೀಕತ್ವ ಬದಲಾವಣೆ ಮಾಡಿಕೊಂಡು ಲೈಸನ್ಸ್ ರಿನೀವಲ್ ಮಾಡಿಸುವ ಹಕ್ಕು ಇದ್ದು. 45 ದಿನ ಕಳೆದರೂ ಮಾಲೀಕತ್ವ ಬದಲಾವಣೆ ಮಾಡದ ಕಾರಣ ಬೆಳ್ತಂಗಡಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ಕಾನೂನು ಪ್ರಕಾರ ವೈನ್ಸ್ ಶಾಪ್ ಗೆ ಬೀಗ ಹಾಕಿ ಸಿಲ್ ಮಾಡಿದ್ದರು.

ಮಾಲೀಕತ್ವ ಬದಲಾವಣೆ: ವಸಂತ ಬಂಗೇರ ನಿಧನದ ಬಳಿಕ ಅಬಕಾರಿ ಕಾನೂನಿನ ಪ್ರಕಾರ ಅಬಕಾರಿ ಲೈಸನ್ಸ್ ಪಡೆದ ಮಾಲೀಕ ಮರಣದ 45 ದಿನದ ಒಳಗಡೆ ಬಂಗೇರ ಪತ್ನಿ ಸುಜಿತಾ.ವಿ.ಬಂಗೇರ ಅವರ ಹೆಸರಿಗೆ ವೈನ್ಸ್ ಶಾಪ್ ಮಾಲೀಕತ್ವ ಬದಲಾವಣೆಗೆ ಪತಿ ನಿಧನದ ಕೆಲ ದಿನಗಳಲ್ಲಿಯೇ ಬೆಳ್ತಂಗಡಿ ಅಬಕಾರಿ ಇಲಾಖೆಯ ಮೂಲಕ ಮಂಗಳೂರು ಅಬಕಾರಿ ಡಿಸಿಯಿಂದ ಬೆಂಗಳೂರು ಅಬಕಾರಿ ಕಮೀಷನರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಂಗೇರರ ಪತ್ನಿ ಮತ್ತು ಇಬ್ಬರು ಮಕ್ಕಳ ನಡುವೆ ಆಸ್ತಿ- ಪಾಸ್ತಿ ವಿಚಾರದಲ್ಲಿ ಕಲಹ ಹೆಚ್ಚಾದ ಕಾರಣದಿಂದ ಪತ್ನಿ ಹೆಸರಿನಲ್ಲಿ ಮಾಲೀಕತ್ವ ಬದಲಾವಣೆಗೆ ನೀಡಿದ್ದ ಅರ್ಜಿಗೆ ಸ್ವತಃ ಮಕ್ಕಳು ನೇರ ಬೆಂಗಳೂರು ಅಬಕಾರಿ ಇಲಾಖೆಗೆ ಹೋಗಿ ಲೇಟರ್ ಮೂಲಕ ನೀಡಿದ ಆಕ್ಷೇಪದಿಂದ ಜೂ.25 ರಂದು ಬೆಂಗಳೂರು ಅಬಕಾರಿ ಕಮೀಷನರ್ ಫೈಲ್ ರಿಜೆಕ್ಟ್ ಮಾಡಿದ್ದಾರೆ‌.

ಕಲಹ ಸರಿಪಡಿಸಲು ಸಿಎಂ ಎಂಟ್ರಿಯಾಗಿದ್ದರೂ ನೋ ಯೂಸ್: ಕುಟುಂಬ ಕಲಹದಿಂದ ಬೇಸರಗೊಂಡ ಬಂಗೇರರ ಪತ್ನಿ ಸುಜಿತಾ.ವಿ.ಬಂಗೇರ ಸಿ.ಎಂ.ಸಿದ್ದರಾಮಯ್ಯನವರ ಆಪ್ತರೊಬ್ಬರಿಗೆ ಕರೆ ಮಾಡಿ ತನ್ನ ಮಕ್ಕಳು ವೈನ್ಸ್ ಶಾಪ್ ಮಾಲೀಕತ್ವ ಸೇರಿದಂತೆ ಆಸ್ತಿ-ಪಾಸ್ತಿಗಳಿಗೆ ಕಲಹ ಮಾಡುತ್ತಿರುವ ವಿಚಾರಗಳನ್ನು ಹೊರಹಾಕಿದ್ದರು . ಇದಕ್ಕೆ ಆಪ್ತರು ಸಿಎಂ ಬಳಿ ಬಂಗೇರರ ಕುಟುಂಬದ ಕಲಹವನ್ನು ಸರಿಪಡಿಸಬೇಕೆಂದು ತಿಳಿಸಿದ್ದರು. ಬಳಿಕ ವೈನ್ಸ್ ಶಾಪ್ ಮಾಲೀಕತ್ವವನ್ನು ಪತ್ನಿ ಹೆಸರಲ್ಲಿ ಮಾತ್ರ ಮಾಡಲು ಬೆಂಗಳೂರು ಅಬಕಾರಿ ಕಮೀಷನರ್ ಗೆ ಸಿಎಂ ಸಿದ್ದರಾಮನವರು ಜೂ.24 ರಂದು ಸಂಜೆ ನೇರ ಕರೆ ಮಾಡಿ ಸೂಚನೆ ನೀಡಿದ್ದರು.ಆದ್ರೆ ಬಂಗೇರರ ಮಕ್ಕಳಿಗೆ ಸಿಎಂ ಮಾತನಾಡಿದ ವಿಚಾರ ತಿಳಿದು ಜೂ.25 ರಂದು ಮಕ್ಕಳಿಬ್ಬರು ಬೆಂಗಳೂರು ಅಬಕಾರಿ ಕಮೀಷನರ್  ಕಚೇರಿಗೆ ಹೋಗಿ ತಂದೆಯ ಲೈಸನ್ಸ್ ಮಾಲೀಕತ್ವವನ್ನು ತನ್ನ ತಾಯಿ ಹೆಸರಲ್ಲಿ ಮಾತ್ರ ನೀಡಬಾರದು ನೀಡಿದ್ರೆ ತಾಯಿ-ಇಬ್ಬರು ಮಕ್ಕಳ ಹೆಸರಲ್ಲಿ ನೀಡಬೇಕೆಂದು ಲೇಟರ್ ಮೂಲಕ ದೂರು ನೀಡಿದ್ದರಿಂದ ಲೈಸನ್ಸ್ ಅರ್ಜಿಯನ್ನು ಕಾನೂನು ದೃಷ್ಟಿಯಿಂದ ಅಬಕಾರಿ ಕಮೀಷನರ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಕುಟುಂಬ ಕಲಹ: ಮಾಜಿ ಶಾಸಕ ವಸಂತ ಬಂಗೇರರು ತಮ್ಮ ಜೀವನದಲ್ಲಿ ಮಾಡಿದ ಆಸ್ತಿ- ಪಾಸ್ತಿಗಳು ಸುಮಾರು 20 ಕೋಟಿ ರೂಪಾಯಿಗೂ ಹೆಚ್ಚು ಇದ್ದು.ಅದರಲ್ಲಿ ಸುಮಾರು 5 ರಿಂದ 6 ಕೋಟಿಯಷ್ಟು ಸಾಲಗಳಿದೆ. ಬಂಗೇರರ ನಿಧನದ ಬಳಿಕ ಆಸ್ತಿ-ಪಾಸ್ತಿಗಳ ಮಾಲೀಕತ್ವ ನೋಂದಣಿ ಮಾಡುವ ವಿಚಾರದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ನಡುವೆ ಈ ಆಸ್ತಿ ನನಗೆ…ಆ ಆಸ್ತಿ ತನಗೆ…ಅದು ನನಗೆ ಮಾತ್ರ ಬೇಕು ಎಂಬ ಹಠದ ಬೇಡಿಕೆಗಳು ಹೆಚ್ಚಾಗಿದ್ದು. ಕಳೆದ 13 ದಿನಗಳಿಂದ ಮನೆಯಲ್ಲಿ ಗಲಾಟೆ ಗದ್ದಲ ಹೆಚ್ಚಾಗಿ ನಡೆಯುತ್ತಿದೆ ಎನ್ನಲಾಗಿದೆ. ದಿವಂಗತ ಕೆ.ವಸಂತ ಬಂಗೇರರು ರಾಜಕೀಯ ಜೀವನದಲ್ಲಿ ಮಾಡಿದ ಒಳ್ಳೆಯ ಹೆಸರನ್ನು ‘ಆಸ್ತಿ-ಪಾಸ್ತಿಗಳ’ ಕಲಹಗಳಿಂದ ಮಕ್ಕಳು ಕೆಟ್ಟ ಹೆಸರನ್ನು ಬೀದಿಗೆ ತರುವುದು ಬೇಡ ಎಂಬುವುದು ವಸಂತ ಬಂಗೇರರ ಅಭಿಮಾನಿಗಳ ಅಶಯವಾಗಿದೆ‌.

- Advertisement -
spot_img

Latest News

error: Content is protected !!