- Advertisement -
- Advertisement -
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಕಲ್ಸಂಕ ತೋಡಿಗೆ ಬಿದ್ದ ಘಟನೆ ರವಿವಾರ ನಡೆದಿದೆ.
ಆಟೋ ರಿಕ್ಷಾವೊಂದು ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಿಂದ ಕಲ್ಸಂಕದ ಕಡೆಗೆ ಬರುತ್ತಿದ್ದು, ಈ ಸಂಧರ್ಭದಲ್ಲಿ ಆಟೋ ರಿಕ್ಷಾ ಮತ್ತೊಂದು ವಾಹನಕ್ಕೆ ಸೈಡ್ ನೀಡುವ ಭರದಲ್ಲಿ ಬಲಬದಿಗೆ ಬಂದಿದೆ. ಈ ವೇಳೆ ಆವರಣ ಗೋಡೆ ಇಲ್ಲದ ಕಾರಣ ನೇರವಾಗಿ ತೋಡಿಗೆ ಬಿದ್ದಿದೆ.
ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಅನಂತರ ಆಟೋರಿಕ್ಷಾವನ್ನು ಸ್ಥಳೀಯರು ಸಹಕರದಿಂದ ಮೇಲಕ್ಕೆತ್ತಲಾಯಿತು.
- Advertisement -