ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಸಮರ್ಥ್ ದೀಕ್ಷಿತ್
ಚೌಡೇಶ್ವರಿ ದೇವಿಯ ಆರಾಧಕರು
ಸ್ತ್ರೀ ವಶೀಕರಣ ಪುರುಷ ವಶೀಕರಣ ಮನೆಯಲ್ಲಿ ಶಾಂತಿ ವಿದ್ಯಾಭ್ಯಾಸ ಶತ್ರು ನಾಶ ಸಾಲದ ಬಾಧೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಕರೆ ಮಾಡಿ
+91 95353 12045
ಜೂನ್ 21 ರ ಅಮಾವಾಸ್ಯೆ ದಿನ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಕರ್ನಾಟಕ ಸೇರಿದ ಭಾರತದಾದ್ಯಂತ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ. ಸೂರ್ಯನು ಗ್ರಹಣದ ಸಂದರ್ಭದಲ್ಲಿ ರಾಜಸ್ಥಾನ, ಪಂಜಾಬ್, ಹರ್ಯಾಣದ ಹಲವು ಭಾಗಗಳಲ್ಲಿ ಕಂಕಣಾಕೃತಿಯಲ್ಲಿ ಸೂರ್ಯ ಕಾಣಲಿದ್ದಾನೆ. ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ.
ಸೂರ್ಯನಿಗೆ ಮಿಥುನ ರಾಶಿ ಮೃಗಶಿರಾ ನಕ್ಷತ್ರದಲ್ಲಿ ರಾಹುಗ್ರಹಣ ಸಂಭವಿಸಲಿದ್ದು, ಬೆಳಗ್ಗೆ 10 ಗಂಟೆ 4 ನಿಮಿಷಕ್ಕೆ ಗ್ರಹಣ ಸ್ಪರ್ಶಕಾಲ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆ 3 ನಿಮಿಷ ಗ್ರಹಣದ ಮಧ್ಯಕಾಲವಾಗಿರುತ್ತದೆ. ಮಧ್ಯಾಹ್ನ 1 ಗಂಟೆ 23 ನಿಮಿಷ ಗ್ರಹಣಮೋಕ್ಷ ಕಾಲವಾಗಿದ್ದು, 3 ಗಂಟೆ 19 ನಿಮಿಷ ಗ್ರಹಣದ ಪುಣ್ಯಕಾಲವಾಗಿರುತ್ತದೆ.
ಸೂರ್ಯಗ್ರಹಣವು ಹಗಲು ಎರಡನೇ ಯಾಮದಲ್ಲಿ ಆಗುತ್ತಿರುವುದರಿಂದ ಗ್ರಹಣದ ಹಿಂದಿನ ದಿನ ರಾತ್ರಿಯಿಂದಲೇ ವೇದ ಆರಂಭವಾಗಲಿದೆ. ಹಿಂದಿನ ದಿನ ರಾತ್ರಿ 10 ಗಂಟೆ 3 ನಿಮಿಷದವರೆಗೆ ಆಹಾರ ಸ್ವೀಕಾರಕ್ಕೆ ಅವಕಾಶವಿದ್ದು ಮಕ್ಕಳು, ವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಅಶಕ್ತರಿಗೆ ಬೆಳಗ್ಗೆ 6 ಗಂಟೆಯವರೆಗೆ ಆಹಾರ ಸೇವಿಸಬಹುದಾಗಿದೆ ಎನ್ನಲಾಗಿದೆ.
ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣ ಆಗುವುದರಿಂದ ಸಿಂಹ, ಕನ್ಯಾ, ಮಕರ, ಮೇಷ ರಾಶಿಯವರಿಗೆ ಶುಭ ಫಲ ಇದೆ.
ತುಲಾ, ಧನು, ಕುಂಭ, ವೃಷಭ ರಾಶಿಯವರಿಗೆ ಮಿಶ್ರಫಲವಿದ್ದು, ಮಿಥುನ, ಕರ್ಕ, ವೃಶ್ಚಿಕ, ಮೀನ ರಾಶಿಯವರಿಗೆ ಅಶುಭ ಫಲವಿದೆ ಎಂದು ಹೇಳಲಾಗಿದೆ.
