- Advertisement -
- Advertisement -
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇಡೀ ಸಮಾಜ ಸಂಘಟನಾತ್ಮಕವಾಗಿ ಇದನ್ನ ಎದುರಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ನಾನು ಸಿಎಂ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ. ಸ್ಫೋಟ ಪ್ರಕರಣ ಎನ್ಐಎಗೆ ಕೊಡುವ ಬಗ್ಗೆ ಸಿಎಂ ಹೇಳಿದ್ದಾರೆ. ಇದೊಂದು ಜಿಹಾದಿ ಕೃತ್ಯವಾಗಿದೆ ಎಂದು ಕೊಯಮತ್ತೂರು ಮತ್ತು ಮಂಗಳೂರು ಸ್ಫೋಟಕ್ಕೆ ಲಿಂಕ್ ಇದೆ. ಕಾನೂನು ನೆರವು ನೀಡುವವರನ್ನು ಸಹ ವಿಚಾರಣೆ ನಡೆಸಬೇಕು ಎಂದರು.
- Advertisement -