Saturday, May 18, 2024
Homeಕರಾವಳಿಉಡುಪಿಮಳೆ ಹಾನಿ ಪರಿಹಾರ ಕಾರ್ಯಕ್ಕೆ ಎಸ್ ಡಿಆರ್ ಎಫ್ ಅನುದಾನ: ದ.ಕ. ಜಿಲ್ಲೆಗೆ 5.63 ಕೋಟಿ...

ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಎಸ್ ಡಿಆರ್ ಎಫ್ ಅನುದಾನ: ದ.ಕ. ಜಿಲ್ಲೆಗೆ 5.63 ಕೋಟಿ ರೂ. ಮತ್ತು ಉಡುಪಿ ಜಿಲ್ಲೆಗೆ 4.73 ಕೋಟಿ ರೂ. ಬಿಡುಗಡೆ

spot_img
- Advertisement -
- Advertisement -

ಬೆಂಗಳೂರು: 2022-23 ನೇ ಸಾಲಿನಲ್ಲಿ ಉಂಟಾದ ಪ್ರವಾಹದ ಪರಿಹಾರ ಮತ್ತು ಮೂಲ ಸೌಲಭ್ಯ ಅಭಿವೃದ್ಧಿಗೆ ರಾಜ್ಯ ವಿಪತ್ತು‌ ನಿರ್ವಹಣಾ ನಿಧಿಯಿಂದ 191.50 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

31 ಜಿಲ್ಲೆಗಳಿಗೆ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಕಂದಾಯ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಬಿಡುಗಡೆ ಮಾಡಲಾಗಿದೆ.

ಉಡುಪಿ ಜಿಲ್ಲೆಗೆ 4.73 ಕೋಟಿ‌ ರೂಪಾಯಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ 5.63 ಕೋಟಿ ರೂಪಾಯಿ ಎಸ್ ಡಿಆರ್ ಎಫ್ ಅನುದಾನ ಬಿಡುಗಡೆಗೊಂಡಿದೆ. ಜಿಲ್ಲೆಗಳಲ್ಲಿ ಮಳೆಯಿಂದ ಆಗಿರುವ ಮನೆ ಹಾನಿ, ರಸ್ತೆ ಹಾನಿ, ಕಟ್ಟಡದ ಹಾನಿ ಸೇರಿದಂತೆ ಮೂಲ ಸೌಕರ್ಯ ದುರಸ್ತಿಗೆ ಅನುದಾನ ಬಳಕೆಯಾಗಲಿದೆ.

- Advertisement -
spot_img

Latest News

error: Content is protected !!