- Advertisement -
- Advertisement -
ಬಂಟ್ವಾಳ: ಇಂದು ಬಂಟ್ವಾಳದ 3 ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಮುಖಾಂತರ ನ್ಯಾಯಾಲಯದ ಪ್ರಕರಣ ಗಳನ್ನು ರಾಜಿ ಸಂಧಾನದ ಮುಖಾಂತರ ಇತ್ಯರ್ಥಗೊಳಿಸಲಾಯ್ತು.
3 ನ್ಯಾಯಾಲಯಗಳಲ್ಲಿ ಒಟ್ಟು 31 ಸಿವಿಲ್ ದಾವೆಗಳು, 574 ಕ್ರಿಮಿನಲ್ ಪ್ರಕರಣಗಳು, 16 ಚೆಕ್ ಅಮಾನ್ಯ ಪ್ರಕರಣಗಳು, 16 ಮೋಟಾರ್ ಆಕ್ಸಿಡೆಂಟ್ ಪ್ರಕರಣಗಳು, 5 ವಿವಾಹ ವಿಚ್ಚೇದನಕ್ಕೆ ಸಂಬಂಧಪಟ್ಟ ಪ್ರಕರಣಗಳು, 2 ಬ್ಯಾಂಕ್ ಗೆ ಸಾಲ ಮರುಪಾವತಿ ಪ್ರಕರಣಗಳು ರಾಜಿ ಸಂಧಾನದ ಮುಖಾಂತರ ಇತ್ಯರ್ಥವಾಯಿತು. ಒಟ್ಟು ಇಂದು ಲೋಕ ಅದಾಲತ್ನಲ್ಲಿ 641 ಪ್ರಕರಣಗಳು ಇತ್ಯರ್ಥಗೊಂಡಿದೆ. ಲೋಕ ಅದಾಲತ್ಗೆ ವಕೀಲರ ಸಂಘ(ರಿ), ಬಂಟ್ವಾಳ ದ ಅಧ್ಯಕ್ಷರು ಬಿ ಗಣೇಶಾನಂದ ಸೋಮಯಾಜಿ, ಪ್ರಧಾನ ಕಾರ್ಯದರ್ಶಿ, ವೀರೇಂದ್ರ ಎಂ ಸಿದ್ದಕಟ್ಟೆ, ಕೋಶಾಧಿಕಾರಿ ಚಂದ್ರಶೇಖರ ಬೈರಿಕಟ್ಟೆ ಮತ್ತು ವಕೀಲರ ಸಂಘ (ರಿ) ಬಂಟ್ವಾಳದ ಎಲ್ಲಾ ಸದಸ್ಯರು ಸಹಕರಿಸಿದರು
- Advertisement -