- Advertisement -
- Advertisement -
ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಚಂದುವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ 6 ಜನರನ್ನು ಬಾಳೂರು ಪಿ.ಎಸ್.ಐ ಪವನ್ ಕುಮಾರ್ ಸಿ.ಸಿ. ನೇತೃತ್ವದ ತಂಡ ಬಂಧಿಸಿದೆ.
ಡೇವಿಡ್ ಬಿನ್ ಫ್ರಾನ್ಸಿಸ್ , ರವಿ ಅಲಿಯಾಸ್ ಸೋಮ , ದೇಜು ಅಲಿಯಾಸ್ ಸೋಮ , ರತ್ನಾಕರ , ಸುಧಾಕರ, ಸತೀಶ್ ಬಂಧಿತ ಆರೋಪಿಗಳು.
ಬಂಧಿತರಿಂದ ಪೊಲೀಸರು 3500 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ಯಲ್ಲಿ ಬಾಳೂರು ಠಾಣೆಯ ಪಿ.ಎಸ್.ಐ. ಪವನ್ ಕುಮಾರ್ ಸಿ.ಸಿ., ಹೇಮಂತ್, ಮನು, ಮಂಜುನಾಥ್, ಜಾಫರ್, ಸತೀಶ್ ಭಾಗಿಯಾಗಿದ್ದರು.
- Advertisement -