- Advertisement -
- Advertisement -
ಸುಳ್ಯ: ದಕ್ಷಿಣಕನ್ನಡ, ಕೊಡಗು ಗಡಿಭಾಗಗಳಲ್ಲಿ ನಿನ್ನೆ ಮಧ್ಯ ರಾತ್ರಿ ಸುಮಾರ 2-15 ರ ಸುಮಾರಿಗೆ ಭೂಮಿ ಕಂಪಿಸಿತ್ತು. ಕಳೆದ 5 ದಿನಗಳಲ್ಲಿ 4ನೇ ಬಾರಿಗೆ ಭೂಮಿ ಕಂಪಿಸಿ ಆತಂಕ ಸೃಷ್ಟಿಸಿತ್ತು. ಇದೀಗ ಇಂದು ಬೆಳಗ್ಗೆ ಮತ್ತೆ 10-48 ರ ಸುಮಾರಿಗೆ ಮತ್ತೆ ಐದನೇ ಬಾರಿಗೆ ಭೂಮಿ ಕಂಪಿಸಿದೆ.
ದಕ್ಷಿಣಕನ್ನಡ, ಕೊಡಗು ಜಿಲ್ಲೆಯ ಗಡಿ ಭಾಗದ ಗ್ರಾಮಗಳಾದ ಕರಿಕೆ, ಸಂಪಾಜೆ, ಚೆಂಬು, ಗೂನಡ್ಕ ಭಾಗದಲ್ಲಿ ಲಘು ಕಂಪನ ಉಂಟಾಗಿದೆ. ಕಳೆದ 9 ಗಂಟೆಗಳ ಅವಧಿಯಲ್ಲಿ ಮೂರನೇ ಬಾರಿಗೆ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪದೇ ಪದೇ ಭೂಮಿ ಕಂಪಿಸುತ್ತಿರೋದು ಕೊಡಗು – ದ.ಕ ಜಿಲ್ಲೆಯ ಗಡಿ ಭಾಗದ ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
- Advertisement -