- Advertisement -
- Advertisement -
ಕೇರಳ: ದಾಳಿಂಬೆ ಬೀಜ ಗಂಟಲಲ್ಲಿ ಸಿಲುಕಿ 10 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಎಡಕ್ಕರ ಎಂಬಲ್ಲಿ ನಡೆದಿದೆ.
ಎಡಕಾರ ನಿವಾಸಿ ಚೆರಾಯಿ ಕೂತ್ತಂಪಾರ ವಳ್ಳಿಕ್ಕಡನ್ ಫೈಸಲ್ ಅವರ ಪುತ್ರಿ ಫಾತಿಮಾ ಮಫರ್ಸಿನಾ ಮೃತ ಮಗು. ಮಗುವಿಗೆ ತಿನ್ನಲು ಕೊಟ್ಟ ದಾಳಿಂಬೆಯ ಬೀಜ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಕೂಡಲೇ ಪೋಷಕರು ಮಗುವನ್ನು ನಿಲಂಬೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಮಗು ಸಾವನ್ನಪ್ಪಿದೆ.
- Advertisement -