ಕಡಬ: ಕಂಠ ಪೂರ್ತಿ ಕುಡಿದು ಗ್ರಾಮಕರಣಿಕನೊಬ್ಬ ಬಾರ್ ಮುಂದೆಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ ಕಡಬ ಸಮೀಪದ ಕಳಾರದಿಂದ ವರದಿಯಾಗಿದೆ.
ಎ.19 ರ(ನಿನ್ನೆ) ಸಂಜೆ ಕಂಠ ಪೂರ್ತಿ ಬಿದ್ದಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲ ಸಮಯದ ಬಳಿಕ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯೇ ಆತನನ್ನು ಮನೆಗೆ ತಲುಪಿಸಿರುವುದಾಗಿ ತಿಳಿದು ಬಂದಿದೆ.15 ದಿನಗಳ ಹಿಂದೆ ಕುಡಿದು ಬಿದ್ದು ಕಣ್ಣಿಗೆ ಪೆಟ್ಟಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಈತನನ್ನು ಕಡಬ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಪಾನಮತ್ತರಾಗಿಯೇ ಕಚೇರಿಗೆ ಬರುತ್ತಿರುವುದಾಗಿ ಗ್ರಾಮದ ಜನರು ಈ ಹಿಂದೆ ಆರೋಪಿಸಿದ್ದರು. ಪಾನಮತ್ತನಾಗಿ ಸಾರ್ವಜನಿಕ ಸ್ಥಳದಲ್ಲಿ ಬೀಳುತ್ತಿರುವುದರಿಂದ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಜುಗರಪಡುವಂತಾಗಿದೆ . ಇಂತಹವರು ಇಲಾಖೆಯ ಹೆಸರಿಗೆ ಕಳಂಕವಾಗಿದ್ದಾರೆ. ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.