- Advertisement -
- Advertisement -
ಸುಳ್ಯ; ವಿದೇಶಕ್ಕೆ ಹೋಗೋದಾಗಿ ಹೇಳಿ ಹೆತ್ತವರಿಗೆ ವಂಚಿಸಿ ನಾಪತ್ತೆಯಾಗಿದ್ದ ಕೊಲ್ಲಮೊಗ್ರದ ಯುವತಿ ಪತ್ತೆಯಾಗಿದ್ದಾಳೆ. ಮಗಳು ವಿದೇಶಕ್ಕೆ ಹೋಗುತ್ತಾಳೆ ಎಂಬ ಖುಷಿಯಲ್ಲಿದ್ದ ಪೋಷಕರು ಆಕೆಯನ್ನು ಬೆಂಗಳೂರು ವಿಮಾನ ನಿಲ್ದಾಣದವರೆಗೆ ಬಿಟ್ಟು ಬಂದಿದ್ದರು. ಯುವತಿ ವಿಮಾನ ನಿಲ್ದಾಣದ ಒಳಗೆ ಹೋಗುವ ನಾಟಕವಾಡಿ ಸವಣೂರಿನ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿದ್ದಳು.
ಬಳಿಕ ವಿಚಾರ ಗೊತ್ತಾಗಿ ಹೆತ್ತವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಬಳಿಕ ಆಕೆಯ ಮೊಬೈಲ್ ಲೋಕೇಷನ್ ಆಧರಿಸಿ ಬೆಂಗಳೂರಿನ ಹೊರ ವಲಯದಲ್ಲಿ ಆಕೆಯನ್ನು ಪತ್ತೆ ಹಚ್ಚಿ ಇದೀಗ ಸುಬ್ರಮಣ್ಯಕ್ಕೆ ಕರೆ ತರುತ್ತಿದ್ದಾರೆ ಎನ್ನಲಾಗಿದೆ.
- Advertisement -