- Advertisement -
- Advertisement -
ಭಾರತದ ೧೫ ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಅಣ ವಚನ ಸ್ವೀಕರಿಸಿದ್ದು, ಈ ಸಂಬಂಧ ಯಕ್ಷಗಾನದ ಗಾಯನವೊಂದು ವೈರಲ್ ಆಗ್ತಿದೆ. ಕು. ಚಿಂತನಾ ಹೆಗಡೆ ಮಾಲ್ಕೋಡ್ ಭಾಗವತಿಕೆ ಮಾಡಿರುವ ‘ಹೆಜ್ಜೆ ಇರಿಸಿದಳು ದ್ರೌಪದಿ ರಾಷ್ಟ್ರಪತಿ ಭವನದಲಿ’ ಯಕ್ಷಗಾನ ಪದ್ಯ ಸಖತ್ ಟ್ರೆಂಡ್ ಆಗುತ್ತಿದೆ. ಮಹಾಭಾರತ ಕಥೆಯ ಪ್ರಧಾನ ಪಾತ್ರ ದೌಪದಿಯ ಹೆಸರನ್ನು ಹೊಂದಿರುವ ನೂತನ ರಾಷ್ಟ್ರಪತಿಯವರನ್ನು ಮಹಾಭಾರತ ಪಾತ್ರಗಳಿಗನ್ವಯವಾಗುವಂತೆ ರಾಷ್ಟ್ರಪತಿ ಭವನದೊಳಗೆ ಸ್ವಾಗತ ಕೋರುವಂತೆ ಸಾಹಿತ್ಯ ರಚಿಸಲಾಗಿದೆ.
ಸಾಹಿತಿ ಅರವಿಂದ ಚಿಪೂಣ್ಯರ್ ಸಾಹಿತ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡ್ ನಿವಾಸಿ ಚಿಂತನಾ ಹೆಗಡೆ ಭಾಗವತಿಕೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಯಕ್ಷಗಾನ ಶೈಲಿಯಲ್ಲಿ ಹಾಡಿರುವ ಪದ್ಯ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
- Advertisement -