Thursday, May 2, 2024
Homeಮನರಂಜನೆಧೋನಿ ನಿವೃತ್ತಿಯ ಬಗ್ಗೆ ಕಿಚ್ಚ ಸುದೀಪ್​ ಹೇಳಿದ್ದೇನು?

ಧೋನಿ ನಿವೃತ್ತಿಯ ಬಗ್ಗೆ ಕಿಚ್ಚ ಸುದೀಪ್​ ಹೇಳಿದ್ದೇನು?

spot_img
- Advertisement -
- Advertisement -

ಎಂ.ಎಸ್​. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಿದ್ದಂತೆ ಇಡೀ ದೇಶ ಬಾರವಾದ ಮನಸ್ಸಿನಿಂದ ಅವರಿಗೆ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದೆ. ಕ್ರಿಕೆಟ್​ ದಿಗ್ಗಜರಿಂದ ಹಿಡಿದು, ಸಿನಿಮಾದವರೂ ಈ ಹಿಟ್​ ಮ್ಯಾನ್​ಗೆ ಭಾವುಕ ವಿದಾಯ ಹೇಳಿದ್ದಾರೆ. ಇನ್ನೆಂದೂ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳದ ಧೋನಿಯನ್ನು ಅಭಿಮಾನಿಗಳು ಶಾಶ್ವತವಾಗಿ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸ್ಯಾಂಡಲ್​ವುಡ್​ ಸ್ಟಾರ್ ಕಿಚ್ಚ ಸುದೀಪ್ ಸಹ ಧೋನಿಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಅದ್ಬುತ ಕ್ರಿಕೆಟರ್ ಆಗಿ ಬಂದವರು, ಶ್ರೇಷ್ಠ ನಾಯಕನಾಗಿ ನಿವೃತ್ತಿಯಾಗಿದ್ದಾರೆ. ಸದ್ಯಕ್ಕಿದು ದಿಢೀರ್ ನಿರ್ಧಾರ. ಈಗಾಗಲೇ ನಾವು ನೀವೆಲ್ಲ ಧೋನಿ ಅವರ ಆಟವನ್ನು ನೋಡಿದ್ದೇವೆ. ಎಂಜಾಯ್​ ಮಾಡಿದ್ದೇವೆ. ಆದರೆ, ಆ ಆಟವೇ ಕೊನೇ ಎಂದು ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಅವರ ಈ ನಿವೃತ್ತಿ ಸಲುವಾಗಿಯೇ ಒಂದು ಅದ್ದೂರಿ ಬೀಳ್ಕೊಡುಗೆ ಮಾಡಲೇಬೇಕು’ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ನಟ ಕಿಚ್ಚ ಸುದೀಪ್​ ಸಿನಿಮಾದಷ್ಟೇ ಇನ್ನೊಂದು ಕ್ಷೇತ್ರವನ್ನು ತುಂಬ ಇಷ್ಟಪಡುತ್ತಾರೆ ಅಂದು ಬೇರಾವುದು ಅಲ್ಲ ಕ್ರಿಕೆಟ್. ಬಿಡುವು ಸಿಕ್ಕಾಗಲೆಲ್ಲ ಕ್ರಿಕೆಟ್​ ಆಡುತ್ತಾರೆ ಸುದೀಪ್​. ಕನ್ನಡ ಚಲನಚಿತ್ರ ಕಪ್​ ಆಯೋಜಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನೂ ಬೆಂಗಳೂರಿಗೆ ಕರೆಸಿದ್ದರು ಸುದೀಪ್​. ಇದೀಗ ತನ್ನಿಷ್ಟದ ಆಟಗಾರನ ನಿವೃತ್ತಿ ಬಗ್ಗೆ ಕೊಂಚ ಬೇಸರದಲ್ಲಿಯೇ ಟ್ವಿಟ್​ ಮಾಡಿದ್ದಾರೆ.

- Advertisement -
spot_img

Latest News

error: Content is protected !!