- Advertisement -
- Advertisement -
ವಿಟ್ಲ: ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆಬ್ರವರಿ ತಿಂಗಳ 05ರಂದು ರಾತ್ರಿ ಭಂಡಾರಯೇರಿ, ಮರುದಿನ ತಾ.06ರಂದು ಬೆಳಿಗ್ಗೆ ಗಂಟೆ 9ರಿಂದ ಜರಗಲಿರುವುದು.
ಆ ಪ್ರಯುಕ್ತ ಗೊನೆಮುಹೂರ್ತವು ಕ್ಷೇತ್ರದ ತಂತ್ರಿಗಳಾದ ಪಳನೀರು ಅನಂತ ಭಟ್ ರವರ ಪೌರೋಹಿತ್ಯದೊಂದಿಗೆ ಸಾಂಪ್ರದಾಯಿಕವಾಗಿ ಇಂದು ನಡೆಯಿತು.
ಈ ವೇಳೆಯಲ್ಲಿ ಸಚಿನ್ ರೈ ಮಾಣಿಗುತ್ತು, ನರೇಂದ್ರ ರೈ ನೆಲ್ತೊಟ್ಟು, ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ನಾರಾಯಣ ಆಳ್ವ ಕೊಡಾಜೆ, ಬಾಲಕೃಷ್ಣ ಆಳ್ವ ಕೊಡಾಜೆ, ಸುದೀಪ್ ಕುಮಾರ್ ಶೆಟ್ಟಿ ಕೊಡಾಜೆ, ಲೋಕೇಶ್ ಬಂಗೇರ ಪಲ್ಲತ್ತಿಲ ಮತ್ತಿತರರು ಉಪಸ್ಥಿತರಿದ್ದರು.
- Advertisement -