- Advertisement -
- Advertisement -
ಮಂಗಳೂರು: ಉಳ್ಳಾಲ ತಾಲೂಕು ಬೆಳ್ಮ ವೃತ್ತದ ಗ್ರಾಮ ಲೆಕ್ಕಿಗ ಪ್ರಮೋದ್ ಕುಮಾರ್ ಅವರನ್ನು ಮಂಗಳೂರು ತಾಲೂಕಿನ ಅಳಪೆ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಅಳಪೆ ವೃತ್ತದಲ್ಲಿ ಖಾಲಿ ಇದ್ದ ಹುದ್ದೆಗೆ ಪ್ರಮೋದ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಪ್ರಮೋದ್ ಕುಮಾರ್ ವರ್ಗಾವಣೆಯಿಂದ ತೆರವಾಗುವ ಬೆಳ್ಮ ವೃತ್ತದ ಗ್ರಾಮ ಲೆಕ್ಕಿಗ ಹುದ್ದೆಗೆ ಇನ್ನೂ ಯಾರನ್ನೂ ನಿಯೋಜನೆ ಮಾಡಿಲ್ಲ.
ಸಾರ್ವತ್ರಿಕ ವರ್ಗಾವಣೆ ಅಡಿಯಲ್ಲಿ ಕಂದಾಯ ಇಲಾಖೆಯಲ್ಲಿ 177 ಗ್ರಾಮ ಲೆಕ್ಕಿಗರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
- Advertisement -