ಕುತ್ಲೂರು : ಮಹಮ್ಮಾಯಿ ಫ್ರೆಂಡ್ಸ್ ಕ್ಲಬ್ ಕೊಕ್ರಾಡಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಇದರ ಸಹಭಾಗಿತ್ವದೊಂದಿಗೆ ಮರಾಟಿ ಸಮಾಜ ಬಾಂಧವರ ಮತ್ತು ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾಟವು ದಿನಾಂಕ 10.12.2023 ರಂದು ಕುತ್ಲೂರು ಶಾಲಾ ಮೈದಾನದಲ್ಲಿ ಸ್ವಲ್ಪ ಸಮಯ ನಡೆದು ನಂತರ ವರುಣ ಆರ್ಭಟಕ್ಕೆ ಅಡ್ಡಿಯಾಗಿ ಹತ್ತಿರದ ಇಂಡೊರ್ ಹಾಲಿನಲ್ಲಿ ಉಳಿದ ಪಂದ್ಯಗಳು ನಡೆದವು.
ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಮತ್ತು ಕ್ರೀಡಾ ಕ್ರೀಡಾಳುಗಳ ಸಮ್ಮುಖದಲ್ಲಿ ಬೆಳ್ತಂಗಡಿಯ ನೋಟರಿ ವಕೀಲರಾದ ಶ್ರೀ ಸಂತೋಷ್ ಕುಮಾರ್ ನಾಯ್ಕ ಮತ್ತು ಅವರ ಧರ್ಮ ಪತ್ನಿಯಾದ ಮಂಗಳೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶ್ರೀಮತಿ ಸೌಮ್ಯಲತ ಸಂತೋಷ್ ಅವರನ್ನು ಶಾಲು ಹೋದಿಸಿ ಸನ್ಮಾನಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮರಾಟಿ ಸಮಾಜ ಸೇವಾ ಸಂಘ (ರ) ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀ ಉಮೇಶ್ ನಾಯ್ಕ, ನೆರಿಮೊಗೇರು ಮರಾಟಿ ಸಂಘದ ಸಂಸ್ಥಾಪಕರಾದ ಮಹಾಲಿಂಗ ನಾಯ್ಕರು, ಮಹಮ್ಮಾಯಿ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷರಾದ ಸತೀಶ್ ನಾಯ್ಕರವರು, ಆರ್.ಪಿ ಕೌಡಿಚ್ಚಾರು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.