Monday, July 1, 2024
Homeಕರಾವಳಿಮಂಗಳೂರುಉಪ್ಪಿನಂಗಡಿಯ ಮಹಿಳೆ ಸಾವು ಪ್ರಕರಣಕ್ಕೆ ಟ್ವಿಸ್ಟ್ ; ಚಿಕ್ಕಮ್ಮನನ್ನೇ ಕೊಂದ 10ನೇ ತರಗತಿ ಬಾಲಕ; ಹತ್ಯೆಗೆ...

ಉಪ್ಪಿನಂಗಡಿಯ ಮಹಿಳೆ ಸಾವು ಪ್ರಕರಣಕ್ಕೆ ಟ್ವಿಸ್ಟ್ ; ಚಿಕ್ಕಮ್ಮನನ್ನೇ ಕೊಂದ 10ನೇ ತರಗತಿ ಬಾಲಕ; ಹತ್ಯೆಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…

spot_img
- Advertisement -
- Advertisement -

ಉಪ್ಪಿನಂಗಡಿಯ ಮಹಿಳೆ ಸಾವು ಪ್ರಕರಣಕ್ಕೆ ಟ್ವಿಸ್ಟ್  ಸಿಕ್ಕಿದೆ. ತನಿಖೆ  ವೇಳೆ ತಾನೇ  ಚಿಕ್ಕಮ್ಮನನ್ನೇ ಕೊಂದಿರೋದಾಗಿ  10ನೇ  ತರಗತಿ ಬಾಲಕ ಒಪ್ಪಿಕೊಂಡಿದ್ದಾನೆ. ಇನ್ನು ಕೊಲೆಗದೆ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.

ಉಪ್ಪಿನಂಗಡಿ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಸಾವನ್ನಪ್ಪಿದರು. ಅವರ ದೇಹದಲ್ಲಿದ್ದ ಗಾಯದ ಗುರುತನ್ನು ಗಮನಿಸಿದ ಅವರ ಪತಿ ವಿಠಲ ಪೈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕೊಲೆಯಾದ ದಿನ  ಹೇಮಾವತಿ ಅವರ ಮನೆಯಲ್ಲಿ ತಂಗಿದ್ದ ಅವರ ಅಕ್ಕನ ಮಗ 10 ನೇ ತರಗತಿ ಬಾಲಕನನ್ನು ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆ ಮಾಡಿದಾಗ ನಿಜಾಂಶ ಗೊತ್ತಾಗಿದೆ.

ಬಾಲಕನು ಚಿಕ್ಕಮ್ಮನ ಜತೆ ಅನುಚಿತವಾಗಿ ವರ್ತಿಸಿದ್ದು, ಆಗ ಪ್ರತಿರೋಧ ಒಡ್ಡಿದಕ್ಕೆ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.

ಹೇಮಾವತಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಪತಿ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ವಿಠಲ ಪೈ ಯಾನೆ ಶೈಲೇಶ್‌ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿ ಉಪ್ಪಿನಂಗಡಿ ಗ್ರಾಮಾಂತರ ಇನ್‌ಸ್ಪೆಕ್ಟರ್‌ ರವಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!