- Advertisement -
- Advertisement -
ಕುಕ್ಕೆ ಸುಬ್ರಹ್ಮಣ್ಯ: ಷಷ್ಠಿ ಸಂಭ್ರಮದ ಮಧ್ಯೆ ಕುಕ್ಕೆ ಸುಬ್ರಮಣ್ಯದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಹಾಗಾಗಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯಾಸ ಮಂದಿರದ ಬಳಿ ಕಾಡಾನೆ ಕಂಡು ಬಂದಿದೆ. ಬಳಿಕ ಪಕ್ಕದ ಮಠದ ಸಭಾಂಗಣ ದೊಳಗೆ ಧಾವಿಸಿ ಬಂದಿದ್ದು ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಕೆಲ ಸಮಯದ ಬಳಿಕ ದೇವರಗದ್ದೆಯತ್ತ ಕಾಡಂಚಿನ ಕಡೆ ಕಾಡಾನೆ ತೆರಳಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ
- Advertisement -