Sunday, May 5, 2024
Homeಕರಾವಳಿಉಡುಪಿತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ 3 ಕುಟುಂಬಕ್ಕೆ ಆರ್ಥಿಕ ನೆರವು!

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ 3 ಕುಟುಂಬಕ್ಕೆ ಆರ್ಥಿಕ ನೆರವು!

spot_img
- Advertisement -
- Advertisement -

ಮಂಗಳೂರು: ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ದಕ್ಷಿಣ ಕನ್ನಡ ತನ್ನ 61ನೇ ತಿಂಗಳ ಸೇವಾ ಪಯಣದಲ್ಲಿ 3 ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿದೆ.

ಉಡುಪಿ ಕುಂಜಾರಗಿರಿ ಕುರ್ಕಾಲು ಗಿರಿನಗರ ವಿಳಾಸದಲ್ಲಿ ವಾಸಿಸುತ್ತಿರುವ ಶಂಕರ ಇವರ ಪತ್ನಿ ಸರಸ್ವತಿಯವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 20,000 ಚೆಕ್ ನ ಧನ ಸಹಾಯ, ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ದೇವಶ್ಯಮೂಡೂರು ಗ್ರಾಮ ವ್ಯಾಪಿಯ ಪಾದೆಕೋಡಿ ನಿವಾಸಿ ಅಣ್ಣುರವರಿಗೆ ಕಳೆದ 10 ತಿಂಗಳುಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 10,000 ಚೆಕ್ ನ ಧನ ಸಹಾಯ ಮತ್ತು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ರಮೇಶ್ ಆಚಾರ್ಯರವರಿಗೆ ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು, ಇವರ ಪತ್ನಿ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರಿಬ್ಬರ ಚಿಕಿತ್ಸೆಗೆ ರೂ. 10,000 ಚೆಕ್ ನ ಧನ ಸಹಾಯ ಇಂದು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್ ಇಲ್ಲಿ ಹಸ್ತಾಂತರಿಸಲಾಯಿತು.ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!