ಬೆಳ್ತಂಗಡಿ: ಬೆಳ್ತಂಗಡಿ ಮೂಲದ ಮುಂಬೈ ನಿವಾಸಿಯಾಗಿರುವ ಬಾಲಚಂದ್ರ ಎಂಬುವವರು ಕುಟುಂಬ ಸಮೇತ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಬಂದಾಗ ಚಿನ್ನಾಭರಣ ಮತ್ತು ಪರ್ಸ್ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ರು. ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕರ ವಿಶೇಷ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತ ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಾಗ ಬಾಲಚಂದ್ರರ ಪತ್ನಿಯ ಕೈನಲ್ಲಿದ್ದ ಬ್ಯಾಗ್ನ ಜಿಪ್ ತೆಗೆದು ಚಿನ್ನಭರಣ ಹಾಗೂ ಪರ್ಸ್ನ ದೋಚಲಾಗಿತ್ತು. ಆರೋಪಿ ಗದಗ ಮೂಲದ ವೃದ್ಧೆ ಭೀಮವ್ವ @ ನಾಗಮ್ಮ ಎಂದು ತಿಳಿದುಬಂದಿದೆ. ಆರೋಪಿಯು ಹೀಗೆ ವಿವಿಧ ಯಾತ್ರಾ ಸ್ಥಳಗಳಲ್ಲಿ ಕಳ್ಳತನ ಮಾಡುತ್ತಿದ್ದಳು ಎಂಬುದು ಬೆಳಕಿಗೆ ಬಂದಿದೆ. ಮುರುಡೇಶ್ವರ, ಬಟ್ಕಳ, ಸುಬ್ರಮಣ್ಯ, ಮುಂತಾದ ಕಡೆ ಕಳ್ಳತನ ಪ್ರಕರಣ ದಾಖಲಾಗಿದೆ. ಕಂಡು ಬಂದಿರುತ್ತದೆ, ಇದೀಗ ಆರೋಪಿಯನ್ನು ವಿಶೇಷ ತಂಡ ಪತ್ತೆ ಮಾಡಿದೆ. ಪ್ರಕರಣ ದಾಖಲಾಗಿ ಶೀಘ್ರವಾಗಿ ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧಿಕ್ಷಕರು ಬಹುಮಾನವನ್ನು ಘೋಷಿಸಿದ್ದಾರೆ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ..