- Advertisement -
- Advertisement -
ಮಂಗಳೂರು : ಕಳ್ಳನೊಬ್ಬ ಕೊರಗಜ್ಜನಿಗೆ ಕೈ ಮುಗಿದು ಕಾಣಿಕೆ ಹುಂಡಿಯನ್ನೇ ಎಗರಿಸಿದ ಘಟನೆ ಮೇರಿಹಿಲ್ನಲ್ಲಿ ನಡೆದಿದೆ.
ಎ.29ರಂದು ಬೆಳ್ಳಂಬೆಳಗ್ಗೆ 5.52ರ ಸುಮಾರಿಗೆ ಮೇರಿ ಹಿಲ್ನ ಕೊರಗಜ್ಜನ ಕಟ್ಟೆಗೆ ಬಂದ ಕಳ್ಳ ಭಕ್ತ ಮೊದಲಿಗೆ ಭಕ್ತಿಯಿಂದ ಕೈಮುಗಿದಿದ್ದಾನೆ. ಬಳಿಕ ಕಟ್ಟೆಗೊಂದು ಸುತ್ತು ಬಂದು ಮತ್ತೆ ಕೈಮುಗಿದಿದ್ದಾನೆ. ಬಳಿಕ ಅಲ್ಲಿಯೇ ಇದ್ದ ಕಾಣಿಕೆ ಹುಂಡಿಯನ್ನು ಎಗರಿಸಿ ಹಿಂಭಾಗದಿಂದ ಪರಾರಿಯಾಗಿದ್ದಾನೆ.
ಕಳ್ಳ ಭಕ್ತನ ಚಹರೆ ಹಾಗೂ ಕರಾಮತ್ತು ಕರಾಮತ್ತು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಪೊಲೀಸರು ಕಳ್ಳ ಭಕ್ತನಿಗಾಗಿ ಬಲೆ ಬೀಸಿದ್ದಾರೆ.
- Advertisement -