- Advertisement -
- Advertisement -
ಮಂಗಳೂರು : 27 ವರ್ಷಗಳ ಬಳಿಕ ಸುಲಿಗೆ ಆರೋಪಿಯೊಬ್ಬನನ್ನು ಮಂಗಳೂರು ಪೊಲೀಸರು ಕೇರಳದ ಕ್ಯಾಲಿಕಟ್ನಲ್ಲಿ ಬಂಧಿಸಿದ್ದಾರೆ. ಪಿ ಮನೋಜ್(52) ಬಂಧಿತ ಆರೋಪಿ. ಬಂಧಿತನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ.
25- 12-1996 ರಲ್ಲಿ ಉರ್ವ ಠಾಣೆಗೆ ಅಶೋಕ್ ನಗರದ ವಿನ್ಸೆಂಟ್ ಎಂಬವರು ತನ್ನ ಒಮಿನಿ ಕಾರು ಕಳವಾದ ಬಗ್ಗೆ ದೂರು ನೀಡಿದ್ದರು.ದೂರು ದಾಖಲಾಗಿ 27 ವರ್ಷಗಳು ಕಳೆದರೂ ಆರೋಪಿಯ ಪತ್ತೆ ಕಾರ್ಯ ವಿಫಲವಾಗಿತ್ತು.
ಈ ಮಧ್ಯೆ ಪ್ರಕರಣದ ಆರೋಪಿ ಕೇರಳದಲ್ಲಿ ತಲೆ ಮೆರಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉರ್ವ ಠಾಣಾಧಿಕಾರಿ ಭಾರತಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿ ಮನೋಜ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
- Advertisement -